ಬಿಜೆಪಿಯ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಭುಗಿಲೆದ್ದ ಬಂಡಾಯ, ಬಲಿಷ್ಠ ನಾಯಕರ ರಾಜೀನಾಮೆ ಪರ್ವ!

Apr 13, 2023, 9:14 PM IST

ಬಿಜೆಪಿಯ 2ನೇ ಪಟ್ಟಿ ಬಿಡುಗಡೆಯಾಗಿದ್ದಂತೆಯೇ ಬಿಜೆಪಿ ರಾಜ್ಯ ನಾಯಕರಿಗೆ ಬಂಡಾಯದ ಬಿಸಿ ಮುಟ್ಟಿದೆ.  ಸುಮಾರು 25 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ.  ವಲಸಿಗರಿಗೆ ಟಿಕೆಟ್ ನೀಡಿದ ಕಡೆ ಕಾರ್ಯಕರ್ತರು ಬಂಡಾಯವೆದ್ದಿದ್ದಾರೆ. ಈ ಬಂಡಾಯ ಇತರ ಪಕ್ಷಗಳಿಗೆ ಲಾಭವಾಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಮೂಡಿಗೆರೆ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಎಂಪಿ ಕುಮಾರಸ್ವಾಮಿ, ಅಥಣಿ ಕ್ಷೇತ್ರದ ಲಕ್ಷ್ಮಣ ಸವದಿ, ರಾಣಿಬೆನ್ನೂರು ಕ್ಷೇತ್ರದ ಆರ್ ಶಂಕರ್ ಸೇರಿ ಹಲವು  ಕ್ಷೇತ್ರದ ನಾಯಕರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ.