ಹನಿಟ್ರ್ಯಾಪ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್! ಮಧುಬೇಟೆ ಹಿಂದೆ ಪ್ರಭಾವಿ ಕೈ ನಾಯಕ?

Nov 30, 2019, 12:25 PM IST

ಬೆಂಗಳೂರು (ನ.30): ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಬಿಜೆಪಿ ಶಾಸಕರನ್ನೇ ಗುರಿಯಾಗಿಸಿ ನಡೆಸಲಾಗಿರುವ ಈ ಮಧುಬೇಟೆಯ ಹಿಂದೆ ಕಾಂಗ್ರೆಸ್ ನಾಯಕನ ಕೇವಾಡವಿದೆಯಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಉಪಚುನಾವಣೆ ವೇಳೆ ಈ ಪ್ರಕರಣವನ್ನು ರಾಜಕೀಯ ದಾಳವಾಗಿ ಬಳಸಲು ಪ್ಲಾನ್ ಹಾಕಲಾಗಿತ್ತಾ? ಇಲ್ಲಿದೆ ವಿವರ...

ಮಧ್ಯಪ್ರದೇಶ ಮಾದರಿಯಲ್ಲಿ ರಾಜ್ಯದ ರಾಜಕಾರಣಿಗಳಿಗೆ, ವಿಶೇಷವಾಗಿ ಬಿಜೆಪಿ ಶಾಸಕರಿಗೆ ಹನಿಟ್ರ್ಯಾಪ್ ಗ್ಯಾಂಗೊಂದು ಖೆಡ್ಡಾ ತೋಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ಒಬ್ಬ ಮಹಿಳೆ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.