ರಾಹುಲ್ ಮಾತಿನಿಂದ ಭುಗಿಲೆದ್ದ ಆಕ್ರೋಶ: ರಾಜೀನಾಮೆಗೆ ಮುಂದಾದ ಹಿರಿಯ ನಾಯಕ

Aug 24, 2020, 3:34 PM IST

ನವದೆಹಲಿ, (ಆ.24): ಇಂದು (ಸೋಮವಾರ) ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ಹಾಗೂ ಕಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ರಾಹುಲ್ ಗಾಂಧಿ ಅವರ ಹೇಳಿಕೆಗೆ ಹಿರಿಯ ನಾಯಕರು ಬೇಸರಗೊಂಡಿದ್ದಾರೆ. 

ಎಐಸಿಸಿ ಹೊಸ ಅಧ್ಯಕ್ಷರ ನೇಮಕ: ಕಾಂಗ್ರೆಸ್‌ ರೂಲ್ ಬುಕ್‌ನಲ್ಲಿವೆ ಹತ್ತಾರು ನಿಯಮಗಳು

ಬಿಜೆಪಿಯೊಂದಿಗೆ ಶಾಮೀಲಾಗಿ ಪಕ್ಷ ಸಂದಿಗ್ಧ ಸ್ಥಿತಿಯಲ್ಲಿ ಇರುವಾಗಲೇ ಉದ್ದೇಶಪೂರ್ವಕಾಗಿ ಕೆಲವರು ನಾಯಕತ್ವದ ಕುರಿತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಗುಲಾಂ ನಬಿ ಆಜಾದ್ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.