Jul 7, 2023, 7:22 PM IST
ಬೆಂಗಳೂರು(ಜು.07) ಕಾಂಗ್ರೆಸ್ ಮಂಡಿಸಿರುವ ಬಜೆಟ್ನಲ್ಲಿ ಕೇಂದ್ರವನ್ನು ಹಾಗೂ ಹಿಂದಿನ ಸರ್ಕಾರವನ್ನು ದೂಷಿಸಿದೇ ಹೊರತು, ಸರ್ಕಾರ ಏನು ಮಾಡಲಿದೆ ಅನ್ನೋದರ ಕುರಿತು ಯಾವುದೇ ವಿವರಣೆ ಇಲ್ಲ. ನೀರಾವರಿ ಯೋಜನೆಗೆ, ಜನಸಾಮಾನ್ಯರಿಗೆ ಬದುಕು ಕಟ್ಟಿಕೊಳ್ಳುವ ಯೋಜನೆಗಳಿಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಏನು ಮಾಡುತ್ತೆ ಅನ್ನೋ ಕುರಿತು ಯಾವುದೇ ವಿಷಯ ಈ ಬಜೆಟ್ನಲ್ಲಿ ಇಲ್ಲ. ಒಂದೇ ವರ್ಷ 85 ಸಾವಿರ ಕೋಟಿ ಸಾಲ ಮಾಡುತ್ತಿದೆ. ಕಾಂಗ್ರೆಸ್ ರಾಜ್ಯದ ಸಾಲ ಏರಿಸಿ, ಜನರಿಗೆ ತೆರಿಗೆ ಭಾಗ್ಯ ನೀಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.