ನಾವ್ ಬರೋದಿಲ್ಲ.. HDK ಸಿದ್ಧಮಾಡಿದ್ದ ಮಾಸ್ಟರ್ ಪ್ಲ್ಯಾನ್ ಫ್ಲಾಪ್!

Nov 1, 2019, 7:28 PM IST

ಬೆಂಗಳೂರು(ನ.01)  ಒಂದು ಕಡೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯರು ಬಂಡಾಯದ ಬಾವುಟ ಹಾರಿಸಿದ್ದನ್ನು ಶಮನ ಮಾಡಲು ಎಚ್‌.ಡಿ.ಕುಮಾರಸ್ವಾಮಿ ಪ್ಲಾನ್ ವೊಂದನ್ನು ಮಾಡಿದ್ದು ಫ್ಲಾಪ್ ಆಗಿದೆ.

ಮಲೇಷಿಯಾಕ್ಕೆ ವಿಧಾನ ಪರಿಷತ್ ಸದಸ್ಯರನ್ನು ಕರೆದುಕೊಂಡು ಹೋಗಿ ಅಲ್ಲಿ ಮಾತುಕತೆ ಮಾಡುವ ಯೋಚನೆಯನ್ನು ಕುಮಾರಸ್ವಾಮಿ ಹಾಕಿಕೊಂಡಿದ್ದರು. ಆದರೆ ನೆರೆ ಪರಿಸ್ಥಿತಿಯನ್ನು ಅಡ್ಡಲಾಗಿಟ್ಟು ನಾವು ಪ್ರವಾಸಕ್ಕೆ ಬರುವುದಿಲ್ಲ ಎಂದು ಪರಿಷತ್ ಸದಸ್ಯರು ಹೇಳಿದ್ದು ಟ್ರಿಪ್ ಠುಸ್ ಆಗಿದೆ.