Party Rounds: ಸತತ 3ನೇ ದಿನ ರಾಜ್ಯ ಸರ್ಕಾರದ ವಿರುದ್ಧ ಉಗ್ರಪ್ರತಾಪಿಯಾದ ಎಚ್‌ಡಿಕೆ!

Jul 5, 2023, 8:14 PM IST

ಬೆಂಗಳೂರು(ಜು.05): ರಾಜ್ಯ ಸರ್ಕಾರದ ವಿರುದ್ಧ ಸತತ 3ನೇ ದಿನವೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉಗ್ರಪ್ರತಾಪಿಯಾಗಿದ್ದಾರೆ. ಹೌದು, ಇಂಧನ ಇಲಾಖೆಯ ಇಬ್ಬರು ಅಧಿಕಾರಿಗಳ ವರ್ಗಾವಣೆಗೆ 10-10 ಕೋಟಿ ರೂ. ದುಡ್ಡು ತೆಗೆದುಕೊಳ್ಳಲಾಗಿದೆ. ಒಂದು ದಿನಕ್ಕೆ ಅವರು 50 ಲಕ್ಷ ರೂ. ಗಳಿಸುತ್ತಾರೆ ಅಂತ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಅವರು ಆ ಪೋಸ್ಟ್‌ಗೆ ಬರೋದಕ್ಕೆ  10-10 ಕೋಟಿ ರೂ. ದುಡ್ಡು ಕೊಟ್ಟು ಬಂದಿದ್ದಾರೆ ಅಂತ ಆರೋಪಿಸಿದ್ದಾರೆ. ಕುಮಾರಸ್ವಾಮಿ ಆರೋಪಕ್ಕೆ ಎಲ್ಲಿದೆ ಸಾಕ್ಷಿ ಅಂತ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡಿದ್ದರು. ಹೀಗಾಗಿ ಇಂದು ಕುಮಾರಸ್ವಾಮಿ ಪೆನ್‌ ಡ್ರೈವ್‌ ಹಿಡಿಕೊಂಡು ಬಂದಿದ್ದರು. 

ನಾನು ಟೆಂಟ್‌ನಲ್ಲಿ ಬ್ಲೂಫಿಲ್ಮ್‌ ತೋರಿಸಿ ಬಂದವನಲ್ಲ: ಡಿಕೆಶಿಗೆ ಟಾಂಗ್‌ ಕೊಟ್ಟ ಹೆಚ್‌ಡಿಕೆ