ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ; ಅಲ್ಪಸಂಖ್ಯಾತರ ಸಭೆಗೆ ಫಿರೋಜ್ ಸೇಠ್ ಗೈರು

Jul 24, 2022, 3:56 PM IST

ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಬೆಳಗಾವಿ ಕಾಂಗ್ರೆಸ್‌ನಲ್ಲೂ ಭಿನ್ನಮತ ವ್ಯಕ್ತವಾಗಿದೆ. ಅಲ್ಪಸಂಖ್ಯಾತ ಚಿಂತನಾ ಸಭೆಯಿಂದ ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧ್ಯಕ್ಷ ರಾಜು ಸೇಠ್ ಗೈರಾಗಿದ್ದಾರೆ. 

ಪಕ್ಷದ ಸಂಘಟನೆಯಷ್ಟೇ ಚರ್ಚೆ ಮಾಡಿದ್ದೇನೆ: ಡಿಕೆಶಿ ತಿರುಗೇಟು

ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಚಿಂತನಾ ಸಭೆ ನಡೆದಿದೆ. ಶಾಸಕ ಜಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಈ ಸಭೆಗೆ ಫಿರೋಜ್ ಸೇಠ್, ರಾಜು ಸೇಠ್ ಗೈರಾಗಿದ್ದರು. ಇವರಿಗೆ ಆಹ್ವಾನವೂ ಇರಲಿಲ್ಲ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಹಾಗೂ ಫಿರೋಜ್ ಸೇಠ್ ನಡುವೆ ಭಿನ್ನಾಭಿಪ್ರಾಯವಿರುವುದು ಜಗಜ್ಜಾಹಿರಾಗಿದೆ.