Belagavi Politics: ಕತ್ತಿ, ಸವದಿ ಟೀಂಗೆ ಕೈಕೊಟ್ಟ ಬಿಜೆಪಿ ನಾಯಕರು..!

Jan 29, 2022, 10:50 AM IST

ಬೆಳಗಾವಿ(ಜ.29): ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರಲ್ಲಿ ಈಗ ಬಣ ರಾಜಕೀಯ ಶುರುವಾಗಿದೆ. ಹೌದು, ಸಚಿವ ಉಮೇಶ್‌ ಕತ್ತಿ ನೇತೃತ್ವದ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ವರನ್ನ ಭೇಟಿ ಮಾಡಿದೆ. ಆದರೆ, ಕತ್ತಿ, ಲಕ್ಷ್ಮಣ ಸವದಿ ಅಂಡ್‌ ಟೀಂಗೆ ಹಲವು ನಾಯಕರು ಕೈಕೊಟ್ಟಿದ್ದಾರೆ. ಕತ್ತಿ ಸೇರಿ ಜಿಲ್ಲೆಯ 9 ನಾಯಕರಿಂದ ಮಾತ್ರ ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿದೆ. ಈ ಮೂಲಕ ಬೆಳಗಾವಿ ನಿಯೋಗ ಅಂತ ಮುಖಭಂಗಕ್ಕೀಡಾದ್ರಾ ಕತ್ತಿ ಮತ್ತು ಸವದಿ ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. 

Sandalwood: ನಿರ್ಮಾಪಕನಿಂದ ಲವ್, ಸೆಕ್ಸ್..ದೋಖಾ, FIR ದಾಖಲು