ಬೆಂಗಳೂರು (ಅ.16): ಕರ್ನಾಟಕದಲ್ಲಿ ಉಪ-ಚುನಾವಣೆ ಕಾವು ಜೋರಾಗುತ್ತಿದೆ. ಅನರ್ಹ ಶಾಸಕರಿಗೆ, ಆಡಳಿತ ಪಕ್ಷ ಬಿಜೆಪಿಗೆ ಮತ್ತು ಕಾಂಗ್ರೆಸ್ ಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅನರ್ಹ ಶಾಸಕರನ್ನು ಹೇಗಾದ್ರೂ ಮಾಡಿ ಸೋಲಿಸಬೇಕು ಎಂದು ಕೈ ಪಡೆ ನಾಯಕರು ರಣತಂತ್ರ ಹೆಣೆಯುತ್ತಿದ್ದರೆ, ಪಕ್ಷದ ಒಳಗಿಂದಲೇ ಸಿದ್ದರಾಮಯ್ಯ ವಿರುದ್ಧ ಅಪಸ್ವರಗಳು ಕೇಳಿ ಬರುತ್ತಿವೆ! ಹೈಕಮಾಂಡ್ ಉಪ-ಚುನಾವಣೆಯ ಜವಾಬ್ದಾರಿಯನ್ನು ಸಿದ್ದರಾಮಯ್ಯ ಹೆಗಲಿಗೆ ಹಾಕಿರುವುದು ಮೂಲ ಕಾಂಗ್ರೆಸ್ಸಿಗರ ಮುನಿಸಿಗೆ ಕಾರಣವಾಗಿದೆ. ಏನು ನಡೀತಾ ಇದೆ ಉಪ-ಚುನಾವಣಾ ಅಖಾಡದಲ್ಲಿ? ಇಲ್ಲಿದೆ ಮತ್ತಷ್ಟು ವಿವರ....