ಲೋಕಸಭಾ ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಕನ್ನಡದಲ್ಲೇ ಗುಡುಗಿದ ಡಿಕೆ ಸುರೇಶ್

Sep 20, 2020, 10:41 PM IST

ನವದೆಹಲಿ, (ಸೆ.20): ಹಿಂದಿ ಹೇರಿಕೆ ಗದ್ದಲದ ನಡುವೆಯೂ ಕರ್ನಾಟಕದ ಕೆಲ ಸಂಸದರು ಲೋಕಸಭಾ ಅಧಿವೇಶನದಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Video: ಎಚ್‌.ಡಿ.ದೇವೇಗೌಡ್ರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೋಡಿ

ನಿನ್ನೆ (ಶನಿವಾರ) ಮಂಡ್ಯ ಲೋಕಸಭಾ ಸದಸ್ಯೆ ಕನ್ನಡದಲ್ಲೇ ಮಾತನಾಡಿ ಪ್ರಾದೇಶಿಕ ಭಾಷೆ ಬಗ್ಗೆ ವಿವರಿಸಿದರು. ಇನ್ನು ಜೆಡಿಎಸ್ ಇಂದು (ಭಾನುವಾರ) ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ಅಷ್ಟೇ ಅಲ್ಲದೇ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕೂಡ ಕನ್ನಡದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.