Oct 23, 2019, 10:10 PM IST
ನವದೆಹಲಿ, [ಅ.23]: ಅಕ್ರಮ ಹಣ ವರ್ಗಾವಣೆ ಅರೋಪದಲ್ಲಿ ಸುಮಾರು 48 ದಿನ ಬಳಿಕ ತಿಹಾರ್ ಜೈಲ್ ನಿಂದ ಡಿ.ಕೆ.ಶಿವಕುಮಾರ್ ಹೊರಬಂದಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನು ಆದೇಶ ಪರಿಶೀಲನೆ ನಡೆಸಿದ ತಿಹಾರ್ ಜೈಲು ಅಧಿಕಾರಿಗಳು ಬಿಡುಗಡೆ ಪ್ರಕ್ರಿಯೆ ನಡೆಸಿ ಬುಧವಾರ ರಾತ್ರಿ 9.30ಕ್ಕೆ ಅವರನ್ನು ಬಿಡುಗಡೆ ಮಾಡಿದರು.
ಸಹೋದರ ಸಂಸದ ಡಿ.ಕೆ.ಸುರೇಶ್ ಜೈಲಿನ ಬಾಗಿಲಲ್ಲೇ ನಿಂತು ಅಣ್ಣನನ್ನು ಹೊರಗಡೆಗೆ ಬರಮಾಡಿಕೊಂಡರು. ಇವರ ಜೊತೆ ಕಾಂಗ್ರೆಸ್ ನಾಯಕರು ಇದ್ದರು. ಇದೇ ವೇಳೆ ಡಿಕೆಶಿ ಏನೆಲ್ಲಾ ಮಾತನಾಡಿದರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.