'RR ನಗರಕ್ಕೆ ಕನಕಪುರ ದೊಡ್ಡ ಬಂಡೆ, ಚಿಕ್ಕ ಬಂಡೆ ಏನ್ರಿ ಕೊಟ್ಟಿದ್ದಾರೆ? ನಾಚಿಕೆ ಆಗಲ್ವೇನ್ರಿ'?

Oct 28, 2020, 11:05 AM IST

ಬೆಂಗಳೂರು (ಅ. 28): ರಾಜ್ಯದ 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ ರಾಜರಾಜೇಶ್ವರಿ ನಗರ ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪರ ಪ್ರಚಾರ ಕೂಡಾ ಜೋರಾಗಿಯೇ ಇದೆ. 

'ಕನಕಪುರ ದೊಡ್ಡ ಬಂಡೆ, ಚಿಕ್ಕ ಬಂಡೆ ನಿಮಗೆ ಏನು ಕೊಟ್ಟಿದ್ದಾರೆ? ಅಕ್ಕಿ ಕೊಟ್ಟಿದ್ದಾರಾ? ರೇಷನ್ ಕೊಟ್ಟಿದ್ದಾರಾ? ಏನೂ ಕೊಡದೇ ಓಟ್ ಕೇಳೋಕೆ ಬರ್ತಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ? ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾ ಹುಕ್ಕೇರಿ ಕುಟುಂಬ? ಇದಕ್ಕೆ ಜಾರಕಿಹೊಳಿ ರಿಯಾಕ್ಷನ್!

ಇನ್ನೊಂದು ಕಡೆ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹವೆಸಗಿ, ತಮ್ಮನ್ನು ಗೆಲ್ಲಿಸಿದ್ದ ಮತದಾರರ ಬೆನ್ನಿಗೆ ಚೂರಿ ಹಾಕಿ ಹೋಗಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿ ' ಎಂದು ಕರೆ ನೀಡಿದ್ದಾರೆ.