ರಾಜ್ಯದಿಂದಲೇ ಶುರುನಾ "ಪ್ರಿಯಾಂಕಾ" ರಾಜಕೀಯದಾಟ? ಸಿದ್ದು ಸಿಎಂ ವ್ಯೂಹ.. ಡಿಕೆ "ಗಾಂಧಿ"ವ್ಯೂಹ..!

May 15, 2022, 1:23 PM IST

ಬೆಂಗಳೂರು, (ಮೇ.15): ಕರ್ನಾಟಕ (Karnataka) ರಾಜ್ಯ ಅಂದ್ರೆ ಬರೀ ಕರ್ನಾಟಕದ ರಾಜಕಾರಣಿಗಳಿಗೆ (Politicians) ಮಾತ್ರವೇ ಅಲ್ಲ, ದೇಶದ ಅದೆಷ್ಟೋ ರಾಜಕಾರಣಿಗಳ ರಾಜಕೀಯ ಪ್ರವೇಶ ಹಾಗೂ ರಾಜಕೀಯ ಪುನರ್ಜನ್ಮಕ್ಕೆ ಕರ್ನಾಟಕದ ರಾಜಕೀಯ ಕಾರಣವಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ (Indira Gandhi), ಸೋನಿಯಾಗಾಂಧಿ (Sonia Gandhi), ವೆಂಕಯ್ಯ ನಾಯ್ಡು (Venkaiah Naidu), ನಿರ್ಮಲಾ ಸೀತಾರಾಮನ್ (Nirmala Sitharaman) ಸೇರಿದಂತೆ ಹಲವು ಘಟಾನುಘಟಿ ನಾಯಕರು ಕರ್ನಾಟಕದಿಂದಲೇ ಗೆದ್ದು ರಾಷ್ಟ್ರರಾಜಕಾರಣಕ್ಕೆ ಹೋಗಿದ್ದಾರೆ. 

ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸ್ತಾರಾ ಪ್ರಿಯಾಂಕಾ ಗಾಂಧಿ..?

ಇದೀಗ ಆ ಸಾಲಿಗೆ ಕಾಂಗ್ರೆಸ್ ನಾಯಕಿ (Congress Leader) ಪ್ರಿಯಾಂಕಾ ಗಾಂಧಿ (Priyanka Gandhi) ಕೂಡ ಸೇರಲಿದ್ದಾರ ಎಂಬ ಕುತೂಹಲ ಶುರುವಾಗಿದೆ.  ರಾಜ್ಯದಿಂದಲೇ ಶುರುನಾ "ಪ್ರಿಯಾಂಕಾ" ರಾಜಕೀಯದಾಟ? ಸಿದ್ದು ಸಿಎಂ ವ್ಯೂಹ.. ಡಿಕೆ "ಗಾಂಧಿ"ವ್ಯೂಹ..!