May 30, 2023, 10:57 PM IST
ಹಣಕಾಸು ಇಲಾಖೆ ಜೊತೆಗೆ ಕಾಂಗ್ರೆಸ್ನ ಉಚಿತ ಗ್ಯಾರೆಂಟಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸರಣಿ ಸಭೆ ನಡೆಸಿದ್ದಾರೆ. ಯೋಜನೆ ವೆಚ್ಚ, ಜಾರಿ ಕುರಿತು ಸತತ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.ಗೃಹ ಲಕ್ಷ್ಮಿ ಯೋಜನೆ ಯಾರಿಗೆ ಹಲವು ಗೊಂದಲ ಎದುರಾಗಿದೆ. ಮನೆಯ ಯಜಮಾನಿಗೆ ಹಣ ನೀಡುವುದು ಹೇಗೆ? ಇದಕ್ಕೆ ಮಾನದಂಡಗಳೇನು? ಅನ್ನೋ ಕುರಿತು ಸತತ ಚರ್ಚೆ ನಡೆಯುತ್ತಿದೆ. ಅತ್ತೆಗೆ ಅಥವಾ ಸೊಸೆಗೆ ಹಣ ನೀಡಬೇಕಾ ಸೇರಿದಂತೆ ಹಲವು ಗೊಂದಲಗಳು ಎದುರಾಗಿದೆ.ಜೂನ್ ತಿಂಗಳಿನಿಂದ ಉಚಿತ ಅಕ್ಕಿ ನೀಡುವ ಯೋಜನೆ ಜಾರಿಯಾಗುವ ಸಾಧ್ಯತೆ ಕಾಣುತ್ತಿಲ್ಲ. ಕಾರಣ ಸರ್ಕಾರ ಹೆಚ್ಚುವರಿ ಅಕ್ಕಿ ಖರೀದಿಗೆ ಇನ್ನೂ ಆದೇಶ ನೀಡಿಲ್ಲ. ಹೀಗಾಗಿ ಅನ್ನಭಾಗ್ಯ ಯೋಜನೆ ಜಾರಿ ಜುಲೈ ತಿಂಗಳಲ್ಲಿ ಆಗುವ ಸಾಧ್ಯತೆ ಇದೆ