ಕಿವಿಗೆ ಹೂವಿಟ್ಟು ಪ್ರತಿಭಟಿಸಿದ ಕಾಂಗ್ರೆಸ್ ಇದೀಗ ಜನರ ತಲೆಗೆ ಚೆಂಡು ಹೂವಿಟ್ಟಿದೆ; ಹೆಚ್‌ಡಿಕೆ ಟೀಕೆ!

Jul 7, 2023, 7:41 PM IST

ಬೆಂಗಳೂರು(ಜು.07) ಕಳೆದ ಫೆಬ್ರವರಿಯಲ್ಲಿ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡಿಸುವಾಗ ಕಾಂಗ್ರೆಸ್ ನಾಯಕರು ಕಿವಿಗೆ ಚೆಂಡು ಹೂವು ಇಟ್ಟು ಪ್ರತಿಭಟನೆ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್ ಮಂಡಿಸಿದ ಬಜೆಟ್ ಮೂಲಕ ರಾಜ್ಯದ 6 ಕೋಟಿ ಜನರ ತಲೆಗೆ ಚೆಂಡು ಹೂವಿಟ್ಟಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆರೋಗ್ಯ ಹಾಗೂ ಶಿಕ್ಷಣ ಅತ್ಯಂತ ಪ್ರಮುಖ. ಆದರೆ ಈ ಬಜೆಟ್‌ನಲ್ಲಿ ಈ ಪ್ರಮುಖ ಕ್ಷೇತ್ರಕ್ಕೆ ಏನು ಕೊಟ್ಟಿದ್ದಾರೆ. ತೇಪೆ ಹಚ್ಚುವ ಕೆಲಸ ಮಾಡಿ, ಎಲ್ಲಾ ಹಣ ತಮ್ಮ ಗ್ಯಾರೆಂಟಿ ಯೋಜನೆಗೆ ಇಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ