ಸಿಎಂ ಸಭೆಯಲ್ಲಿ ಯತ್ನಾಳ್ ಗರಂ, ಮುನಿಸಿಗೆ ಮುಲಾಮು ಹಚ್ತಾರಾ ಬಿಎಸ್‌ವೈ.?

Jan 5, 2021, 10:09 AM IST

ಬೆಂಗಳೂರು (ಜ. 05): ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಆಡಳಿತಾರೂಢ ಬಿಜೆಪಿ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಶಾಸಕರು ನೀಡುವ ಪತ್ರಗಳಿಗೆ ಬೆಲೆ ಇಲ್ಲದಂತಾಗಿದೆ. ನಾವು ನೀಡುವ ಪತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಗುತ್ತಿಗೆದಾರರು, ಮಧ್ಯವರ್ತಿಗಳ ಶಿಫಾರಸ್ಸುಗಳಿಗೆ ಮನ್ನಣೆ ನೀಡುತ್ತಾರೆಂದು ಆರೋಪಿಸಿದ್ದಾರೆ. ಇನ್ನು ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್‌ರ ಮನವೊಲಿಸಲು ಸಿಎಂ ಮುಂದಾಗಿದ್ದಾರೆ. 

ಯಾವುದಕ್ಕೂ ಡೋಂಟ್ ಕೇರ್, ಸಿಎಂ ಸಭೆಯಲ್ಲಿ ಸಿಡಿದೆದ್ದ ಯತ್ನಾಳ್