ರಾಜ್ಯಪಾಲರಿಗೆ ಸಚಿವರ ಪಟ್ಟಿ ನೀಡಿದ ಸಿಎಂ ; ಸಂಭಾವ್ಯರ ಹೆಸರುಗಳಿವು..!

Jan 12, 2021, 1:00 PM IST

ಬೆಂಗಳೂರು (ಜ. 12): ತೀವ್ರ ಕುತೂಹಲ ಮೂಡಿಸಿದ್ದ ಸಂಪುಟ ವಿಸ್ತರಣೆ ಜ. 13 ರ ಸಂಜೆ  ನಡೆಯುವುದು ಬಹುತೇಕ ನಿಚ್ಚಳವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. 

ರಾಜಾಹುಲಿ ಸಿಎಂ ಪಟ್ಟ ಗಟ್ಟಿ ಮಾಡಿಕೊಂಡಿದ್ಹೇಗೆ.?

7 ಶಾಸಕರು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಬ್ಬರು ಸಚಿವರ ರಾಜಿನಾಮೆ ಪಡೆಯುವ ಸಾಧ್ಯತೆಯೂ ಹೆಚ್ಚಿದೆ ಎನ್ನಲಾಗುತ್ತಿದೆ. ಪಕ್ಷೇತರ ಶಾಸಕರಾಗಿ, ಅಬಕಾರಿ ಸಚಿವರಾಗಿರುವ ಆರ್ ನಾಗೇಶ್‌ರನ್ನು ಕೈ ಬಿಡುವ ಸಂಭವವಿದೆ. ಸಂಪುಟಕ್ಕೆ ಯಾರು ಸೇರ್ಪಡೆಯಾಗಬಹುದು, ಯಾರು ಔಟ್ ಆಗಬಹುದು ಎಂಬ ಸ್ಪಷ್ಟ ಚಿತ್ರಣ ಹೊರಬೀಳಬೇಕಿದೆ.