Karnataka Politics : ಹೊಸ ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ -ಸಿಎಂ ಬದಲು

Dec 23, 2021, 9:36 AM IST

ಬೆಂಗಳೂರು (ಡಿ.23) :  ಹೊಸ ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ (Politics) ಸಂಚಲನ ಮೂಡುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಬದಲಾವಣೆ ಗುಸು ಗುಸು ಆರಂಭವಾಗಿದೆ. ಬೆಳಗಾವಿಯಲ್ಲಿ (Belagavi) ರಾಜಕೀಯ ಮೇಲಾಟ ರಂಗೇರಿದ್ದು ತೆರೆ ಮರೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದ್ದು ಇದರ ಬೆನ್ನಲ್ಲೇ   ಸಚಿವರ ಸಭೆ ನಡೆಯುತ್ತಿದೆ. 

Karnataka CM:ಸಿಎಂ ಬೊಮ್ಮಾಯಿ ಬದಲಾವಣೆ, ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸಚಿವ

ಊಟದ ಹೆಸರಿನಲ್ಲಿ ಬಿಜೆಪಿ ನಾಯಕರು ಗುಪ್ತವಾಗಿ ಸಭೆ ಸೇರುತ್ತಿದ್ದು ಇದು ಹೊಸ ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ ಒಂದು ಸೃಷ್ಟಿಯಾಗುವ ಲಕ್ಷಗಳ ಬಗ್ಗೆ ಸ್ಪಷ್ಟವಾದ ಸುಳಿವು ನೀಡುತ್ತಿದೆ.