ಹಳೇ ಮೈಸೂರು ಆಯ್ತು, ಈಗ ಕಲ್ಯಾಣ ಕರ್ನಾಟಕದಲ್ಲಿ ಆಪರೇಷನ್ ಕಮಲ

May 16, 2022, 7:48 PM IST

ಬೆಂಗಳೂರು, (ಮೇ.16): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಈ ಬಾರಿ ಅಧಿಕಾರ ಹಿಡಿಯಲು ಆಪರೇಷನ್ ಕಮಲಕ್ಕಿಳಿದಿದೆ.

Asianet Suvarna Special: ಜಿಲ್ಲೆ ಜಿಲ್ಲೆಯಲ್ಲೂ ಸೈಲೆಂಟಾಗಿ ಆಪರೇಷನ್ ಆರಂಭಿಸಿದ ಸಿಎಂ

ಹೌದು....ಪಕ್ಷ ದುರ್ಬಲವಾದ ಕಡೆಗಳಲ್ಲಿ ಬೇರೆ ಪಕ್ಷದ ನಾಯಕರಿಗೆ ಬಿಜೆಪಿ ಗಾಳ ಹಾಕುತ್ತಿದೆ. ಮೊನ್ನೇ ಹಳೇ ಮೈಸೂರು ಭಾಗದಲ್ಲಿ ಕೆಲ ನಾಯಕರನ್ನು ಆಪರೇಷನ್ ಕಮಲ ಮಾಡಿದ್ದು, ಇದೀಗ ಆಪರೇಷನ್ ಕಮಲ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಶುರುವಾಗಿದೆ.