Jal Jeevan Mission: ಜೆಜೆಎಂ ಅನುಷ್ಠಾನದಲ್ಲಿ ಕರ್ನಾಟಕವೇ ನಂ.1: ಮೋದಿ ಕನಸು ನನಸು ಮಾಡಿದ ಬೊಮ್ಮಾಯಿ

Dec 24, 2022, 1:23 PM IST

ಭಾರತದಲ್ಲಿ ನೀರಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ, 2019 ರಲ್ಲಿ ಜಲ ಜೀವನ್‌ ಮಿಷನ್‌ ಯೋಜನೆ ಜಾರಿಗೆ ತಂದಿದ್ದಾರೆ. ಪ್ರಧಾನಿ ಮೋದಿಯ ಈ ಕನಸನ್ನು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ನನಸು ಮಾಡಿದ್ದಾರೆ. ಮನೆ-ಮನೆಗೂ ನೀರು ಅನುಷ್ಠಾನದಲ್ಲಿ ಕರ್ನಾಟಕವೇ ನಂಬರ್ ಒನ್ ಆಗಿದೆ. ಸಿಎಂ ಬೊಮ್ಮಾಯಿ ಒಂದೊಂದೇ ಯೋಜನೆಯನ್ನು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಇಂಪ್ಲಿಮೆಂಟ್‌ ಮಾಡಿ ಸಕ್ಸಸ್‌ ಕಾಣುತ್ತಿದ್ದಾರೆ. ಇದಕ್ಕೆ ಕಾರಣ ರಣೋತ್ಸಾಹ ಹಾಗೂ ಹಗಲು ಇರುಳು ಪರಿಶ್ರಮ. ಇವತ್ತು ರಾಜ್ಯದಲ್ಲಿ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ. ರಾಜ್ಯದಲ್ಲಿ ಜಲಜೀವನ್‌ ಮಿಷನ್‌ ಸಕ್ಸಸ್‌ ಆಗಿದ್ದು ಹೇಗೆ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌. ವಿಡಿಯೋ ನೋಡಿ.

ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಹಗಲು ದರೋಡೆ; ಜೆಡಿಎಸ್ ಮುಖಂಡ ಆರೋಪ