ಸಾಹುಕಾರನ ಕುರ್ಚಿ ಸಹೋದರನಿಗ ಸಿಗುತ್ತಾ? ತೆರೆಮರೆಯಲ್ಲಿ ಅಣ್ತಮ್ಮಾಸ್ ಸರ್ಕಸ್!

Mar 7, 2021, 11:09 AM IST

ಬೆಂಗಳೂರು (ಮಾ. 07): ರಾಸಲೀಲೆ ಪ್ರಕರಣದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್‌ ಜಾರಕಿಹೊಳಿ ರಾಜೀನಾಮೆ ನೀಡಿದ್ದು , ಜಲಸಂಪನ್ಮೂಲ ಖಾತೆ ಅವರ  ಸಹೋದರ ಬಾಲಚಂದ್ರ ಜಾರಕಿಹೊಳಿ ಪಾಲಾಗುವ ದಟ್ಟ ಸಾಧ್ಯತೆಯಿದೆ.

ಸಾಹುಕಾರ್ ರಾಸಲೀಲೆ ಸೀಡಿ: ಸಂತ್ರಸ್ತ ಯುವತಿ ಇದ್ದದ್ದು ಪಿಜಿಯಲ್ಲಲ್ಲ, ಇವರ ಮನೆಯಲ್ಲಿ!

ಮಹತ್ವದ ಜಲ ಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡುವುದಾದರೆ ತಾವು ರಾಜೀನಾಮೆ ನೀಡಲು ಸಿದ್ಧ ಎಂದು ರಮೇಶ್‌ ನೀಡಿದ ಸಂದೇಶಕ್ಕೆ ಹೈಕಮಾಂಡ್‌ ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ ನಂತರ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.