ಸಂಪುಟ ಕಸರತ್ತು: ಬೆಳಗಾವಿಯ ಇಬ್ಬರು ಸಚಿವರಿಗೆ ಗೇಟ್ ಪಾಸ್...?

Nov 19, 2020, 6:43 PM IST

ಬೆಂಗಳೂರು, (ನ.19): ಅದ್ಯಾಕೋ ರಾಜ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬರುತ್ತಿಲಲ್. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪದೇ ಪದೇ ದೆಹಲಿಗೆ ಹೋಗಿ ಬರಿಗೈಯಲ್ಲಿ ವಾಪಸ್ ಆಗುತ್ತಿದ್ದಾರೆ.

ಸಂಪುಟ ವಿಸ್ತರಣೆಯೋ, ಪುನಾರಚನೆಯೋ: ನಡ್ಡಾ ಭೇಟಿ ಬಳಿಕ ಸಿಎಂ ಹೇಳಿದ್ದು ಹೀಗೆ...!

ಹೌದು..ಬುಧವಾರ ಅಷ್ಟೇ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಒಪ್ಪಿಗೆ ಪಡೆಯಲು ದೆಹಲಿಗೆ ತೆರಳಿದ್ದರು. ಆದ್ರೆ, ಅದು ಸಹ ಫಲ ಕೊಟ್ಟಿಲ್ಲ. ಇದರ ಮಧ್ಯೆ ಲೆಕ್ಕಾಚಾರದಲ್ಲಿ ಬೆಳಗಾವಿ ಇಬ್ಬರು ಸಚಿವರ ಖರ್ಚಿಗೆ ಕಂಟಕ ಎದುರಾಗಿದೆ.