ಧನ್ಯವಾದ ಕರ್ನಾಟಕ; ಸಾರ್ವಜನಿಕರ ನೆರವನ್ನು ಸಂತ್ರಸ್ತರಿಗೆ ತಲುಪಿಸಿದೆ ಸುವರ್ಣ ನ್ಯೂಸ್

Aug 11, 2019, 3:16 PM IST

ಪ್ರವಾಹಪೀಡಿತರಿಗೆ ನೆರವಾಗಲು ಸುವರ್ಣನ್ಯೂಸ್ ‘ಉತ್ತರ’ ದೊಂದಿಗೆ ಕರುನಾಡು ಎನ್ನುವ ಅಭಿಯಾನವೊಂದನ್ನು ಶುರು ಮಾಡಿದೆ. ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಕಷ್ಟು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗಿದೆ. ಬೆಳಗಾವಿಯ ಸೇಸರ್ಗಿ ಮಲ್ಲಾಪುರದ ಗಾಳೇಶ್ವರ ಮಠದಲ್ಲಿರುವ ನಿರಾಶ್ರಿತರಿಗೆ ಸುವರ್ಣ ನ್ಯೂಸ್ ಅಗತ್ಯ ಸಾಮಗ್ರಿಗಳನ್ನು ತಲುಪಿಸಿದೆ. ಸಾರ್ವಜನಿಕರು ಕೊಟ್ಟಿರುವ ಸಾಮಗ್ರಿಗಳು ಸುರಕ್ಷಿತವಾಗಿ ಸಂತ್ರಸ್ತ್ರರನ್ನು ತಲುಪಿಸಿದ ಸಾರ್ಥಕತೆ ಸುವರ್ಣ ನ್ಯೂಸ್ ನದ್ದು.