ಅಗಲಿದ ಕಾರ್ನಾಡ್ ಬಗ್ಗೆ ರವಿ ಬೆಳಗೆರೆ ಖಾಸ್ ಬಾತ್

Jun 10, 2019, 3:01 PM IST

ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಮ್ಮನ್ನಗಲಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಪತ್ರಕರ್ತ ರವಿ ಬೆಳಗೆರೆ, ಕಾರ್ನಾಡ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 

ನಾವು ಅವರ ನಾಟಕಗಳನ್ನು ನೋಡಿ ಬೆಳೆದವರು. ಅವರಿಗೆ ಇಂಗ್ಲೀಷ್ ಭಾಷೆ ಮೇಲೆ ಬಹಳ ಹಿಡಿತವಿತ್ತು. ಇಂಗ್ಲೀಷ್ ನಲ್ಲಿ ನಾಟಕಗಳನ್ನು ಬರೆದ್ರೆ ನೋಬೆಲ್ ಪ್ರಶಸ್ತಿಗೆ ಬಹಳ ಹತ್ತಿರಕ್ಕೆ ಹೋಗ್ತಾ ಇದ್ರು. ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಭಾರತಕ್ಕೆ, ಪ್ರಪಂಚಕ್ಕೆ ಪರಿಚಯಿಸಿದ ಅಪರೂಪದ ಸಾಹಿತಿ ಎಂದು ಕುಂ ವೀರಭದ್ರಪ್ಪ ಹೇಳಿದ್ದಾರೆ.