ಸ್ನೇಹಿತನ ಬಿಡುಗಡೆಗೆ HDK ಕಾರಣ, ಕುಮಾರಸ್ವಾಮಿ ಹೇಳಿದ್ದಿಷ್ಟು

Oct 23, 2019, 7:16 PM IST

ಬೆಂಗಳೂರು(ಅ. 23) ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿರುವುದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಯಾವತ್ತೋ ಜಾಮೀನು ಸಿಗಬೇಕಿದ್ದ ಪ್ರಕರಣ. ಈ ದೇಶದಲ್ಲಿ ಇನ್ನೂ ನ್ಯಾಯಾಂಗ ವ್ಯವಸ್ಥೆ ಜೀವಂತವಾಗಿದೆ ಎಂದು ಹೇಳಿದ್ದಾರೆ.

ಇಂಥ ಪ್ರಕರಣಗಳ ಬಗ್ಗೆ, ತನಿಖಾ ಹಂತದಲ್ಲಿಯೇ ಬಂಧನ ಮಾಡುತ್ತಿರುವ ಬಗ್ಗೆ ದೊಡ್ಡ ಚರ್ಚೆ ಆಗಬೇಕಿದೆ. ರಾಜಕೀಯವಾಗಿ ಪ್ರಕರಣಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ, ವ್ಯವಸ್ಥೆ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.