ಟಿಪ್ಪು ವೇಷದಲ್ಲಿ ಕುದುರೆ ಏರಿಬಂದು ಹಣ ಹಂಚಿದ ಜಮೀರ್ ಅಹ್ಮದ್

Sep 7, 2019, 8:42 PM IST

ಬೆಂಗಳೂರು, [ಸೆ.07]: ಹಿರಿಯ ಕಾಂಗ್ರೆಸ್ ಮುಖಂಡ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ಬಿ ಝಡ್ ಜಮೀರ್ ಅಹ್ಮದ್ ಖಾನ್, ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಗಮನ ಸೆಳೆದಿದ್ದಾರೆ. ಶುಕ್ರವಾರ ತಮ ಸ್ವಕ್ಷೇತ್ರವಾದ ಚಾಮರಾಜಪೇಟೆಯ ಟಿಪ್ಪುನಗರದಲ್ಲಿ ಕೆ.ಆರ್.ಮಾರುಕಟ್ಟೆ ವಾರ್ಡ್ ಪಾಲಿಕೆ ಸದಸ್ಯೆ ನಸೀಮಾ ಆಯುಬ್ ಖಾನ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಟಿಪ್ಪುವಿನಂತೆ ಪೇಟ, ಕೈಯಲ್ಲಿ ಖಡ್ಗ ಹಿಡಿದು ಅಶ್ವಾರೋಹಿಯಾಗಿ ಆಗಮಿಸಿ, ಎಲ್ಲರನ್ನು ಅಚ್ಚರಿಗೊಳಿಸಿದರು.