Jun 22, 2019, 5:07 PM IST
ಬೆಂಗಳೂರು,(ಜೂ .22): ತಮ್ಮನ್ನು ಶಕುನಿ ಎಂದು ಕರೆದಿದ್ದ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಶ್ರೀರಾಮುಲು ಕಿಡಿಕಾರಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ. ಡಿ.ಕೆ ಶಿವಕುಮಾರ್ ಶಕುನಿ ಇದ್ದಂಗೆ. ಯುದ್ದ ಮುಗಿದ ಮೇಲೆ ನಿಜವಾದ ಶಕುನಿ ಯಾರೆಂದು? ಗೊತ್ತಾಗಲಿದೆ ಎಂದು ಶ್ರೀರಾಮುಲು ಕುಹಕವಾಡಿದ್ದಾರೆ.