ಫೋಟೋ ಫ್ಲ್ಯಾಶ್‌ಗೆ ಬೆದರಿದ ಅಂಬಾರಿ ಹೊತ್ತಿದ್ದ ಅರ್ಜುನ!

ಫೋಟೋ ಫ್ಲ್ಯಾಶ್‌ಗೆ ಬೆದರಿದ ಅಂಬಾರಿ ಹೊತ್ತಿದ್ದ ಅರ್ಜುನ!

Published : Oct 09, 2019, 12:54 PM ISTUpdated : Oct 09, 2019, 01:00 PM IST

ಫೋಟೋ ಹುಚ್ಚಿಗೆ ಅರ್ಜುನ ತಬ್ಬಿಬ್ಬು| ಅಂಬಾರಿ ಕಟ್ಟುವ ವೇಳೆ ಫೋಟೋ ಫ್ಲ್ಯಾಶ್| ಫೋಟೋ ತೆಗೆಯೋ ವೇಳೆ ಬೆದರಿದ ಅರ್ಜುನ| ಅರ್ಜುನ ಬೆದರಿದ್ರಿಂದ ಬಲಕ್ಕೆ ವಾಲಿದ ಅಂಬಾರಿ| ಫ್ಲಾಶ್‌ ಲೈಟ್‌ನಿಂದ ತಬ್ಬಿಬ್ಬುಗೊಂಡ ಅರ್ಜುನ| ಇದ್ಯಾವುದನ್ನು ಲೆಕ್ಕಿಸದೆ ಯಶಸ್ವಿ ಸವಾರಿ ಮಾಡಿದ ಅರ್ಜುನ| 

ಮೈಸೂರು[ಅ.09]: ನಾಡಹಬ್ಬ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ಮುಗಿದಿದೆ. ಆದ್ರೆ, ನಿನ್ನೆ ಅಂಬಾರಿ ಕಟ್ಟುವ ವೇಳೆ ವ್ಯಕ್ತಿಯೊಬ್ಬ ಫೋಟೋ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಅರ್ಜುನ ತಬ್ಬಿಬ್ಬು ಗೊಂಡು ಅತ್ತಿತ್ತ ಜರುಗಾಡಿದ್ದಾನೆ. ಇದರ ಪರಿಣಾಮ ಅಂಬಾರಿ ಸ್ವಲ್ಪ ಬಲಕ್ಕೆ ವಾಲಿತ್ತು. ಬಲಶಾಲಿ ಅರ್ಜುನ ಇದ್ಯಾವುದನ್ನು ಲೆಕ್ಕಿಸದೆ ಅಂಬಾರಿ ಹೊತ್ತು ಮೂರೂವರೆ ಕಿ.ಮೀ.ಯಶಸ್ವಿಯಾಗಿ ಸಾಗಿದ್ದಾನೆ.

ಸಾಮಾನ್ಯವಾಗಿ ಅಂಬಾರಿ ಎಡಕ್ಕೆ ಇಲ್ಲವೇ ಬಲಕ್ಕೆ ವಾಲದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಯಾಕೆಂದರೆ ಅಂಬಾರಿ ಕೊಂಚ ಒಂದು ಕಡೆ ವಾಲಿದರೂ ಆನೆಗೆ ಒಂದೇ ಕಡೆ ಭಾರ ಬೀಳುತ್ತೆ. ನಾಲ್ಕೂವರೆ ಕಿ.ಮೀ. 750 ಕೆಜಿ ಅಂಬಾರಿ ಹೊತ್ತು ಸಾಗುವುದು ಕಷ್ಟವಾಗುತ್ತದೆ. ನಿನ್ನೆ ಅಂಬಾರಿಯನ್ನು ಆನೆ ಬೆನ್ನಿಗೆ ಹಗ್ಗಗಳಿಂದ ಬಿಗಿಯುವಾಗ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಆನೆಯ ಮುಂದೆ ಬಂದು ಫೋಟೊ ತೆಗೆಯಲು ಆರಂಭಿಸಿದ.

ಈ ಸಂದರ್ಭದಲ್ಲಿ ಕ್ಯಾಮೆರಾ ಫ್ಲಾಶ್‌ ಲೈಟ್‌ನಿಂದ ತಬ್ಬಿಬ್ಬುಗೊಂಡ ಅರ್ಜುನ ಕೊಂಚ ಅತ್ತಿತ್ತ ಜರುಗಾಡಿದ್ದಾನೆ. ಆಗ ಮಾವುತರು ಹಗ್ಗ ಬಿಗಿಯುವಲ್ಲಿಕೊಂಚ ವ್ಯತ್ಯಾಸವಾಯಿತು. ಹಾಗಾಗಿ ಅಂಬಾರಿ ಬಲಕ್ಕೆ ವಾಲುವಂತಾಯಿತು. 

ಹೇಗಿತ್ತು ನಾಡಹಬ್ಬ ದಸರಾ? ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

22:25ಹೆಂಡತಿ ಬಡಿಸೋ ಊಟದಲ್ಲಿ ವಿಷ, ಗಂಡ ಮಟಾಷ್‌: ಹೆಣದ ಮೇಲೆ ಹುಲಿ ಕಥೆ ಕಟ್ಟಿದ ಪತ್ನಿ!
45:49ಮೈಸೂರಿನ ಉದಯಗಿರಿ ಗಲಭೆ ಪೂರ್ವನಿಯೋಜಿತ ಕೃತ್ಯ?
04:48MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ
01:38ಮೈಸೂರು ಜೈಲಿನಲ್ಲಿ 3 ಕೈದಿಗಳ ಸಾವು: ಸೇವಿಸಿದ್ದು ಎಸ್ಸೆನ್ಸಾ, ಮಾದಕ ವಸ್ತುನಾ?
11:11ನನ್ನ ಬದ್ಧತೆ ಬಗ್ಗೆ ಪ್ರಶ್ನೆ ಮಾಡಬೇಡಿ, ಮೋದಿ ಹೆಸರಲ್ಲಿ ರಾಜಕೀಯಕ್ಕೆ ಬಂದವನು ನಾನು: ಪ್ರತಾಪ್‌ ಸಿಂಹ
23:13ಇಬ್ಬರೂ ಜೀವದ ಗೆಳೆತಿಯರು, ಇಬ್ಬರಿಗೂ ಒಬ್ಬನೇ ಬಾಯ್‌ಫ್ರೆಂಡ್‌! ಗೆಳತಿ ಸತ್ತಳು ಅಂತ ಅವನೂ ಸತ್ತ!
06:26ಮುಡಾ ಕೇಸ್‌ಗೆ ಟ್ವಿಸ್ಟ್: ಸುವರ್ಣ ನ್ಯೂಸ್‌ನಲ್ಲಿ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ!
07:17ಚಾಮುಂಡಿಯ ಸೀರೆ ಕದ್ದವರನ್ನು ಬಯಲಿಗೆಳೆದ ಸ್ನೇಹಮಯಿ ಮೇಲೆಯೇ ರಿವೇಂಜ್‌ಗೆ ಇಳಿದ ಸರ್ಕಾರ!
18:49120 ನಿಮಿಷ ವಿಚಾರಣೆ, ಸಿದ್ದರಾಮಯ್ಯ 40 ವರ್ಷಗಳ ಕ್ಲೀನ್ ಇಮೇಜ್‌ಗೆ ಮುಡಾ ಕೊಳ್ಳಿ !
20:59ಮುಡಾ ಸಂಕಷ್ಟದಲ್ಲಿ ಸಿದ್ದರಾಮಯ್ಯ:ರಾಜೀನಾಮೆ ಕೊಟ್ಟು ಕಳಂಕದಿಂದ ಹೊರ ಬರಲಿ ಎಂದ ವರುಣಾ ಕ್ಷೇತ್ರದ ಜನ!