ಸುವರ್ಣ ಕನ್ನಡಿಗ 2024: ಹಲವು ಕ್ಷೇತ್ರದಲ್ಲಿ ಸಾಧನೆಗೈದ 22 ಸಾಧಕರಿಗೆ ಪ್ರಶಸ್ತಿ ಪ್ರದಾನ

Mar 10, 2024, 5:55 PM IST

ಏಷ್ಯಾನೆಟ್ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಸುವರ್ಣ ಕನ್ನಡಿಗ 2024 ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. 22 ಸಾಧಕರಿಗೆ ಹಾಗೂ ಮೂವರು ವಿಶೇಷ ಗೌರವಾನ್ವಿತರಿಗೆ ಈ ಕಾರ್ಯಕ್ರಮದ ಮೂಲಕ ಸನ್ಮಾನಿಸಲಾಗಿದೆ. ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಹಲವರ ಕೊಡುಗೆಯಿಂದ ಕರ್ನಾಟಕ ದೊಡ್ಡ ಬ್ರ್ಯಾಂಡ್‌ ಆಗಿದೆ ಎಂದು ಅವರು ಹೇಳಿದರು. ಸಮಾಜಕ್ಕೆ ಅತ್ಯುತ್ತಮ ಕೆಲಸವನ್ನು ಮಾಡುತ್ತಿರುವ ವ್ಯಕ್ತಿಗಳನ್ನು ಹುಡುಕಿ ಸಮಾಜದ ಮುಂದೆ ಇಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.