Uttara Kannada: ಸರ್ಕಾರಕ್ಕೆ ಸಡ್ಡು: ಬಲಿಷ್ಠ  ಬ್ರಿಡ್ಜ್‌ ನಿರ್ಮಿಸಿದ ಗ್ರಾಮಸ್ಥರು..!

Uttara Kannada: ಸರ್ಕಾರಕ್ಕೆ ಸಡ್ಡು: ಬಲಿಷ್ಠ ಬ್ರಿಡ್ಜ್‌ ನಿರ್ಮಿಸಿದ ಗ್ರಾಮಸ್ಥರು..!

Suvarna News   | Asianet News
Published : Jan 17, 2022, 12:59 PM IST

*  ಊರಿನ 200-300 ಯುವಕರು ಹಾಗೂ ಹಿರಿಯರು ಸೇರಿ ಸೇತುವೆ ನಿರ್ಮಾಣ
*  ಒಂದೇ ವಾರದಲ್ಲಿ ನದಿಗೆ ಅಡ್ಡಲಾಗಿ ಗ್ರಾಮ ಸೇತುವನ್ನೇ ನಿರ್ಮಿಸಿದ ಜನ
*  ಕಳೆದ ಬಾರಿಯ ಭಾರೀ ಪ್ರವಾಹದಿಂದ ಕೊಚ್ಚಿಹೋಗಿದ್ದ ಗುಳ್ಳಾಪುರದ ಸೇತುವೆ
 

ಕಾರವಾರ(ಜ.17):  ಕಳೆದ ಬಾರಿ ಬೃಹತ್ ಸೇತುವೆ ಉರುಳಿಬಿದ್ದ ನಂತರ ತುಂಬಿ ಹರಿಯುವ ನದಿಯನ್ನು ಬೋಟ್ ಮೂಲಕವೇ ದಾಟುತ್ತಿದ್ದ ಈ ಊರಿನ ಗ್ರಾಮಸ್ಥರು ಕೊನೆಗೂ‌ ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡು ಬಲಿಷ್ಠ ಗ್ರಾಮ ಸೇತುವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಹೌದು, ನಾವು ಮಾತನಾಡುತ್ತಿರೋದು ಗುಳ್ಳಾಪುರದ ವಿಚಾರ. ಅಂಕೋಲಾ, ಯಲ್ಲಾಪುರ ಹಾಗೂ ಶಿರಸಿಯನ್ನು ಸಂಪರ್ಕಿಸುವ ಪ್ರಮುಖ ಪ್ರದೇಶ ಇದಾಗಿದ್ದು, ಯಲ್ಲಾಪುರ ಹಾಗೂ ಅಂಕೋಲಾದ ಗಡಿಭಾಗವಾಗಿರುವ ಕೈಗಡಿಯೆಂಬ ತೀರಾ ಕುಗ್ರಾಮಕ್ಕೆ‌ ಗುಳ್ಳಾಪುರದ ಮೂಲಕವೇ ಸಾಗಬೇಕಾಗಿದೆ.‌ ಕಳೆದ ಬಾರಿ ಕಾಣಿಸಿಕೊಂಡ ಭಾರೀ ಪ್ರವಾಹದಿಂದಾಗಿ ಗಂಗಾವಳಿ ನದಿಗೆ ಅಡ್ಡಲಾಗಿ ಕಟ್ಟಲಾದ ರಾಜ್ಯ ಹೆದ್ದಾರಿ ಸಂಪರ್ಕಿಸುವ ಗುಳ್ಳಾಪುರದ ಸೇತುವೆಯೇ ನೀರಿನಲ್ಲಿ ಕೊಚ್ಚಿಹೋಗಿತ್ತು. 

ಶಾಸಕಿ ರೂಪಾಲಿ ನಾಯ್ಕ್, ಸಚಿವ ಶಿವರಾಮ ಹೆಬ್ಬಾರ್ ಹಾಗೂ ಇತರ ಸಚಿವರು ಮತ್ತು ಕೈಗಡಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಸ್ಥಳವನ್ನು ವೀಕ್ಷಿಸಿ ಹೊಸ ಸೇತುವೆ ಮಾಡಿಸಿಕೊಡುವ ಆಶ್ವಾಸನೆ ನೀಡಿದ್ದರು. ಆದರೂ, ಇಲ್ಲಿನ ಜನರಿಗೆ ಮುರಿದ ಸೇತುವೆ ಮತ್ತೆ ಶೀಘ್ರದಲ್ಲಿ ನಿರ್ಮಾಣವಾಗುವ ಸಾಧ್ಯತೆಗಳು ಕಂಡಿರಲಿಲ್ಲ. 

Covid 19 Spike: ರಾಜ್ಯದ 6 ಜಿಲ್ಲೆಗಳಲ್ಲಿ ಸೋಂಕು ಏರಿಕೆ: 1 ರಿಂದ 9ನೇ ತರಗತಿ ಬಂದ್!

ಸಚಿವ ಶಿವರಾಮ ಹೆಬ್ಬಾರ್ ರಾಜ್ಯ ಸರಕಾರದ ನೆರೆ ಪರಿಹಾರದ‌ ಅನುದಾನದಡಿ 20 ಲಕ್ಷ ರೂ. ನೀಡಿದ್ದರಾದ್ರೂ, ಹಳೇಯ ರೀತಿಯ ಕಾಂಕ್ರೀಟ್ ಸೇತುವೆ ಬೇಕಂದ್ರೆ 60 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಅನುದಾನ ಬೇಕಿತ್ತು.‌ ಆದರೆ, ಸದ್ಯಕ್ಕೆ ಸಚಿವರು ಒದಗಿಸಿದ 20ಲಕ್ಷ ರೂ. ಅನುದಾನ ಹಾಗೂ ತಮ್ಮ ಹಣವನ್ನು ಕೂಡಾ ವ್ಯಯಿಸಿದ ಜನರು ತಾವೇ ಶ್ರಮ ವಹಿಸಿಕೊಂಡು ಅತ್ಯುತ್ತಮ ಹಾಗೂ ಬಲಿಷ್ಠ ಸೇತುವೆ ನಿರ್ಮಾಣ ಮಾಡಿದ್ದಾರೆ. 
 

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
Read more