ಬೆಂಗಳೂರಿನಲ್ಲಿ ನೀಚ ಕೃತ್ಯ: ಸ್ನಾನ ಮಾಡದೇ ದೇವಸ್ಥಾನಕ್ಕೆ ಬಂದಳೆಂದು ಮಹಿಳೆ ಮೇಲೆ ಹಲ್ಲೆ

Jan 6, 2023, 2:42 PM IST

ಬೆಂಗಳೂರಿನ ಅಮೃತಹಳ್ಳಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯ ಜುಟ್ಟು ಹಿಡಿದು ಧರಧರನೆ ಎಳೆದೊಯ್ದು, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲಾಗಿದೆ. ಹೇಮಾವತಿ ಎಂಬಾಕೆ ಮೇಲೆ ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣ ಎಂಬಾತ ಇಂತಹ ಹೀನ ಕೃತ್ಯ ಎಸಗಿದ್ದಾನೆ. ದೇವರ ದರ್ಶನಕ್ಕೆ ಅವಕಾಶ ಕೊಡದೇ ರಾಡ್‌ನಿಂದ ಹಲ್ಲೆ ಮಾಡಲಾಗಿದೆ. ಡಿಸೆಂಬರ್‌ 21ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಿಳೆ ಸ್ನಾನ ಮಾಡಿಲ್ಲ ಎಂಬ ನೆಪ ಒಡ್ಡಿ ಹಲ್ಲೆ ಮಾಡಲಾಗಿದೆ.