KSRTC ಬಸ್‌ ಓಡಿಸಲು ಬಿಡಲ್ಲ: ಖಾಸಗಿ ಬಸ್‌ ಸಿಬ್ಬಂದಿ ಪಟ್ಟು..!

Apr 9, 2021, 3:15 PM IST

ಬೆಂಗಳೂರು(ಏ.09): ಖಾಸಗಿ ಬಸ್‌ ಹಾಗೂ ಸಾರಿಗೆ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಇಂದು(ಶುಕ್ರವಾರ) ನಗರದ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಓಡಿಸೋಕೆ ಬಿಡೋದಿಲ್ಲ ಅಂತ ಖಾಸಗಿ ಬಸ್‌ ಸಿಬ್ಬಂದಿ ಪಟ್ಟು ಹಿಡಿದಿದ್ದರು. ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣಕ್ಕೆ 5 ಸರ್ಕಾರಿ ಬಸ್‌ಗಳು ಬಂದಿದ್ದಕ್ಕೆ ಗಲಾಟೆ ನಡೆದಿದೆ. ನಮಗೆ ಪರ್ಮಿಟ್‌ ಕೊಟ್ಟು ಈಗ ಸರ್ಕಾರಿ ಬಸ್‌ ಬಿಟ್ಟಿದ್ದಾರೆ. ಜನರು ಮೊದಲು ನಮ್ಮ ಬಸ್‌ ಹತ್ತಲಿ ಆಮೇಲೆ ನಿಮಗೆ ಅಂತ ಸಾರಿಗೆ ನೌಕರರಿಗೆ ಖಾಸಗಿ ಬಸ್‌ ಸಿಬ್ಬಂದಿ ತಾಕೀತು ಮಾಡಿದ್ದಾರೆ.

ಬಸ್‌ ಸ್ಟ್ರೈಕ್‌: ಕೆಲಸಕ್ಕೆ ಬರುವಂತೆ ಸಾರಿಗೆ ನೌಕರರಿಗೆ ಸಿಎಂ ಮನವಿ