ಕೋಲಾರ: ಈ ಊರಲ್ಲಿ ಆಮೆಗಳಿಗೆ ತೊಂದ್ರೆ ಕೊಟ್ರೆ ಕಷ್ಟ ಕಟ್ಟಿಟ್ಟ ಬುತ್ತಿ..!

ಕೋಲಾರ: ಈ ಊರಲ್ಲಿ ಆಮೆಗಳಿಗೆ ತೊಂದ್ರೆ ಕೊಟ್ರೆ ಕಷ್ಟ ಕಟ್ಟಿಟ್ಟ ಬುತ್ತಿ..!

Suvarna News   | Asianet News
Published : Nov 06, 2021, 11:19 AM ISTUpdated : Nov 06, 2021, 11:20 AM IST

*   ಈ ಊರಿನಲ್ಲಿ ಪ್ರತಿಯೊಬ್ಬರ ಮನೆಯ ಗೋತ್ರವೂ ಆಮೆ! ಆಮೆಗಳೇ ಆರಾಧ್ಯ ದೈವ
*   ನೂರಾರು ವರ್ಷಗಳಿಂದ ಗ್ರಾಮದ ಕಲ್ಯಾಣಿಯಲ್ಲಿ ವಾಸವಾಗಿರುವ ಸಾವಿರಾರು ಆಮೆಗಳು 
*   ಆಮೆಗೆ ಪೂಜೆ ಸಲ್ಲಿಸುವ ಗ್ರಾಮಸ್ಥರು; ಗ್ರಾಮಸ್ಥರೆ ಕಾವಲುಗಾರರು, ರಕ್ಷಕರು, ಪೂಜಕರು 
 

ಕೋಲಾರ(ನ.06):  ಆ ಪ್ರಾಣಿಗಳು ಆ ಗ್ರಾಮದ ಜನರ ಆರಾಧ್ಯ ದೈವ. ಆ ದೈವವನ್ನು ಊರಿನ ಕಲ್ಯಾಣಿಗಳಲ್ಲಿ ಸಾಕಿರುವ ಜನರು ಆ ಪ್ರಾಣಿ ತಮ್ಮ ಮನೆ ಬಾಗಿಲಿಗೆ ಬಂದ್ರೆ ಅದೃಷ್ಟ ಎಂದು ಭಾವಿಸುತ್ತಾರೆ. ಆ ಪ್ರಾಣಿ ರಸ್ತೆಯಲ್ಲಿ ಸಿಕ್ಕರೆ ಪೂಜೆ ಮಾಡಿ ಮತ್ತೆ ಆ ಕಲ್ಯಾಣಿಯಲ್ಲಿ ಬಿಟ್ಟು ನೂರಾರು ವರ್ಷಗಳಿಂದ ಅವುಗಳನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ ಯಾವುದಾ ಪ್ರಾಣಿ ಈ ಸ್ಟೋರಿ ನೋಡಿ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅರಹಳ್ಳಿ ಗ್ರಾಮದಲ್ಲಿ. ಕಳೆದ ನೂರಾರು ವರ್ಷಗಳಿಂದ ಗ್ರಾಮದ ಕಲ್ಯಾಣಿಯಲ್ಲಿ ವಾಸವಾಗಿರುವ ಸಾವಿರಾರು ಆಮೆಗಳು ಈ ಗ್ರಾಮದ ಜನರ ಆರಾಧ್ಯ ದೈವ. ಗ್ರಾಮದಲ್ಲಿ ಆಮೆ ಗೋತ್ರದ ಜನರೇ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾವಿರಾರು ಆಮೆಗಳಿಗೆ ಗ್ರಾಮಸ್ಥರೇ ಕಾವಲುಗಾರರು, ರಕ್ಷಕರು, ಪೂಜಕರು. ಮಧ್ಯಾಹ್ನದ ಬಿಸಿಲಿಗೆ ತಲೆ ಹೊರ ಹಾಕಿ ಬಂಡೆಗಳ ಮೇಲೆ ವಿಶ್ರಾಂತಿ ಪಡೆಯುವ ಆಮೆಗಳು, ಯಾವುದಾದ್ರು ಹೊಸ ಮುಖಗಳು ಕಾಣಿಸುತ್ತಿದ್ದಂತೆ ನೀರಿಗೆ ಹಾರುತ್ತವೆ. 

ಕೇಕ್‌ನಲ್ಲಿ ಅರಳಿದ 'ಗೋವರ್ಧನಗಿರಿ' ; ಇಸ್ಕಾನ್‌ನಲ್ಲಿ ದೀಪಾವಳಿ ವಿಶೇಷ ಪೂಜೆ

ಕೆಲವೊಮ್ಮೆ ಆಮೆ ಮೊಟ್ಟೆ ಇಡಲು ಹಾಗೂ ಸಂತಾನಕ್ಕೆ ಹೊಲ-ಗದ್ದೆ, ಮನೆಗಳಿಗೆ ಬಂದಾಗ ಅದೃಷ್ಟ ಎಂದು ಆಮೆಗೆ ವಿಶೇಷ ಪೂಜೆ ಸಲ್ಲಿಸಿ, ಅವುಗಳನ್ನ ಮತ್ತೆ ಕಲ್ಯಾಣಿಯ ನೀರಿನಲ್ಲಿ ಬಿಡಲಾಗುತ್ತೆ. ತಮಗೆ ಕಷ್ಟ ಬಂದಾಗ ಈ ಗ್ರಾಮಸ್ಥರು ಪೂಜೆ ಮಾಡೋದು ಕೂಡ ಇದೆ ಆಮೆ ದೇವರಿಗೆ. ಇನ್ನೂ ಆಮೆಗಳಿಗೆ ಯಾರಾದ್ರು ತೊಂದರೆ ಕೊಟ್ರೆ ಅವರಿಗೆ ಕಷ್ಟ ಕಟ್ಟಿಟ್ಟ ಬುತ್ತಿ ಹಾಗಾಗಿ ಆಮೆಗಳಿಗೂ ಇಲ್ಲಿನ ಗ್ರಾಮಸ್ಥರಿಗೂ ಒಂದು ರೀತಿಯ ಭಾವಾನಾತ್ಮ ಸಂಬಂಧವಿದೆ.
 

23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
Read more