ಕೋಲಾರ: ಈ ಊರಲ್ಲಿ ಆಮೆಗಳಿಗೆ ತೊಂದ್ರೆ ಕೊಟ್ರೆ ಕಷ್ಟ ಕಟ್ಟಿಟ್ಟ ಬುತ್ತಿ..!

ಕೋಲಾರ: ಈ ಊರಲ್ಲಿ ಆಮೆಗಳಿಗೆ ತೊಂದ್ರೆ ಕೊಟ್ರೆ ಕಷ್ಟ ಕಟ್ಟಿಟ್ಟ ಬುತ್ತಿ..!

Suvarna News   | Asianet News
Published : Nov 06, 2021, 11:19 AM ISTUpdated : Nov 06, 2021, 11:20 AM IST

*   ಈ ಊರಿನಲ್ಲಿ ಪ್ರತಿಯೊಬ್ಬರ ಮನೆಯ ಗೋತ್ರವೂ ಆಮೆ! ಆಮೆಗಳೇ ಆರಾಧ್ಯ ದೈವ
*   ನೂರಾರು ವರ್ಷಗಳಿಂದ ಗ್ರಾಮದ ಕಲ್ಯಾಣಿಯಲ್ಲಿ ವಾಸವಾಗಿರುವ ಸಾವಿರಾರು ಆಮೆಗಳು 
*   ಆಮೆಗೆ ಪೂಜೆ ಸಲ್ಲಿಸುವ ಗ್ರಾಮಸ್ಥರು; ಗ್ರಾಮಸ್ಥರೆ ಕಾವಲುಗಾರರು, ರಕ್ಷಕರು, ಪೂಜಕರು 
 

ಕೋಲಾರ(ನ.06):  ಆ ಪ್ರಾಣಿಗಳು ಆ ಗ್ರಾಮದ ಜನರ ಆರಾಧ್ಯ ದೈವ. ಆ ದೈವವನ್ನು ಊರಿನ ಕಲ್ಯಾಣಿಗಳಲ್ಲಿ ಸಾಕಿರುವ ಜನರು ಆ ಪ್ರಾಣಿ ತಮ್ಮ ಮನೆ ಬಾಗಿಲಿಗೆ ಬಂದ್ರೆ ಅದೃಷ್ಟ ಎಂದು ಭಾವಿಸುತ್ತಾರೆ. ಆ ಪ್ರಾಣಿ ರಸ್ತೆಯಲ್ಲಿ ಸಿಕ್ಕರೆ ಪೂಜೆ ಮಾಡಿ ಮತ್ತೆ ಆ ಕಲ್ಯಾಣಿಯಲ್ಲಿ ಬಿಟ್ಟು ನೂರಾರು ವರ್ಷಗಳಿಂದ ಅವುಗಳನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ ಯಾವುದಾ ಪ್ರಾಣಿ ಈ ಸ್ಟೋರಿ ನೋಡಿ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅರಹಳ್ಳಿ ಗ್ರಾಮದಲ್ಲಿ. ಕಳೆದ ನೂರಾರು ವರ್ಷಗಳಿಂದ ಗ್ರಾಮದ ಕಲ್ಯಾಣಿಯಲ್ಲಿ ವಾಸವಾಗಿರುವ ಸಾವಿರಾರು ಆಮೆಗಳು ಈ ಗ್ರಾಮದ ಜನರ ಆರಾಧ್ಯ ದೈವ. ಗ್ರಾಮದಲ್ಲಿ ಆಮೆ ಗೋತ್ರದ ಜನರೇ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾವಿರಾರು ಆಮೆಗಳಿಗೆ ಗ್ರಾಮಸ್ಥರೇ ಕಾವಲುಗಾರರು, ರಕ್ಷಕರು, ಪೂಜಕರು. ಮಧ್ಯಾಹ್ನದ ಬಿಸಿಲಿಗೆ ತಲೆ ಹೊರ ಹಾಕಿ ಬಂಡೆಗಳ ಮೇಲೆ ವಿಶ್ರಾಂತಿ ಪಡೆಯುವ ಆಮೆಗಳು, ಯಾವುದಾದ್ರು ಹೊಸ ಮುಖಗಳು ಕಾಣಿಸುತ್ತಿದ್ದಂತೆ ನೀರಿಗೆ ಹಾರುತ್ತವೆ. 

ಕೇಕ್‌ನಲ್ಲಿ ಅರಳಿದ 'ಗೋವರ್ಧನಗಿರಿ' ; ಇಸ್ಕಾನ್‌ನಲ್ಲಿ ದೀಪಾವಳಿ ವಿಶೇಷ ಪೂಜೆ

ಕೆಲವೊಮ್ಮೆ ಆಮೆ ಮೊಟ್ಟೆ ಇಡಲು ಹಾಗೂ ಸಂತಾನಕ್ಕೆ ಹೊಲ-ಗದ್ದೆ, ಮನೆಗಳಿಗೆ ಬಂದಾಗ ಅದೃಷ್ಟ ಎಂದು ಆಮೆಗೆ ವಿಶೇಷ ಪೂಜೆ ಸಲ್ಲಿಸಿ, ಅವುಗಳನ್ನ ಮತ್ತೆ ಕಲ್ಯಾಣಿಯ ನೀರಿನಲ್ಲಿ ಬಿಡಲಾಗುತ್ತೆ. ತಮಗೆ ಕಷ್ಟ ಬಂದಾಗ ಈ ಗ್ರಾಮಸ್ಥರು ಪೂಜೆ ಮಾಡೋದು ಕೂಡ ಇದೆ ಆಮೆ ದೇವರಿಗೆ. ಇನ್ನೂ ಆಮೆಗಳಿಗೆ ಯಾರಾದ್ರು ತೊಂದರೆ ಕೊಟ್ರೆ ಅವರಿಗೆ ಕಷ್ಟ ಕಟ್ಟಿಟ್ಟ ಬುತ್ತಿ ಹಾಗಾಗಿ ಆಮೆಗಳಿಗೂ ಇಲ್ಲಿನ ಗ್ರಾಮಸ್ಥರಿಗೂ ಒಂದು ರೀತಿಯ ಭಾವಾನಾತ್ಮ ಸಂಬಂಧವಿದೆ.
 

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
Read more