ಸಿಗುತ್ತಿಲ್ಲ ಮೀನು, ಬೆಲೆ ಗಗನಕ್ಕೆ, ಮಾರುಕಟ್ಟೆಯಲ್ಲಿ ಮೀನು ಸಿಗದೇ ಮತ್ಸ್ಯ ಪ್ರಿಯರಿಗೆ ನಿರಾಸೆ.!

ಸಿಗುತ್ತಿಲ್ಲ ಮೀನು, ಬೆಲೆ ಗಗನಕ್ಕೆ, ಮಾರುಕಟ್ಟೆಯಲ್ಲಿ ಮೀನು ಸಿಗದೇ ಮತ್ಸ್ಯ ಪ್ರಿಯರಿಗೆ ನಿರಾಸೆ.!

Suvarna News   | Asianet News
Published : Oct 24, 2021, 03:16 PM IST

700- 800 ರೂಪಾಯಿ ಬೆಲೆಬಾಳುವ ಅಂಜಲ್ ಮೀನುಗಳು ನವರಾತ್ರಿ ಸಮಯದಲ್ಲಿ ಕೇವಲ ಇನ್ನೂರು ರೂಪಾಯಿಗೆ  ಮಾರಾಟವಾಗುತ್ತವೆ. ಇನ್ನೂ ನೂರು ರೂಪಾಯಿಗೆ 4 ಅಥವಾ 5 ಸಿಗುತ್ತಿದ್ದ ಬಂಗುಡೆ ಮೀನುಗಳು  ನವರಾತ್ರಿ ದಿನಗಳಲ್ಲಿ 15 ರಷ್ಟು ಸಿಗುತ್ತಿದ್ದವು.

ಉಡುಪಿ (ಅ. 24): 700- 800 ರೂಪಾಯಿ ಬೆಲೆಬಾಳುವ ಅಂಜಲ್ ಮೀನುಗಳು (Fish) ನವರಾತ್ರಿ ಸಮಯದಲ್ಲಿ ಕೇವಲ ಇನ್ನೂರು ರೂಪಾಯಿಗೆ  ಮಾರಾಟವಾಗುತ್ತವೆ. ಇನ್ನೂ ನೂರು ರೂಪಾಯಿಗೆ 4 ಅಥವಾ 5 ಸಿಗುತ್ತಿದ್ದ ಬಂಗುಡೆ ಮೀನುಗಳು ನವರಾತ್ರಿ ದಿನಗಳಲ್ಲಿ 15 ರಷ್ಟು ಸಿಗುತ್ತಿದ್ದವು. ಕಾರಣ ಏನಪ್ಪಾ ಅಂದ್ರೆ ನವರಾತ್ರಿಯಲ್ಲಿ 90% ಹಿಂದುಗಳು ಮಾಂಸಾಹಾರವನ್ನು ತ್ಯಜಿಸಿ ಸಾತ್ವಿಕ ಆಹಾರ ಸ್ವೀಕರಿಸಿ ವೃತ ಆಚರಿಸುತ್ತಾರೆ. 

ಈ ವೇಳೆ ಕೋಳಿ ಮತ್ತು ಮೀನು ವ್ಯಾಪಾರ ಸಂಪೂರ್ಣವಾಗಿ ನೆಲಕಚ್ಚಿ ಹೋಗುತ್ತವೆ. ನವರಾತ್ರಿ (navaratri) ಸಂದರ್ಭದಲ್ಲಿ ಆದ ಅಷ್ಟು ನಷ್ಟವನ್ನು ಮೀನುಗಾರರು ಸರಿದೂಗಿಸಿ ಕೊಳ್ಳುವುದು ನವರಾತ್ರಿ ಮುಗಿದ ಬಳಿಕ. ನವರಾತ್ರಿಯ ನಂತರ ಜನರು ಮುಗಿಬಿದ್ದು ಮೀನು ಖರೀದಿಗೆ ಬರುತ್ತಾರೆ. ಈ ವೇಳೆ ಮೀನಿನ ಬೆಲೆ ಗಗನಕ್ಕೇರುತ್ತದೆ. ಈ ಬಾರಿ ನವರಾತ್ರಿಯ ನಂತರ ಮೀನಿನ ಬೆಲೆ ಏನೋ ಗಗನಕ್ಕೇರಿದೆ. ಆದರೆ ಮೀನುಗಾರರಿಗೆ ಮಾತ್ರ ಮೀನುಗಾರಿಕೆ ನಡೆಸಲು ಪ್ರಕೃತಿ ಅಸಹಕಾರ ತೋರುತ್ತಿದೆ. ವಾಯುಭಾರ ಕುಸಿತದಿಂದ ಸರಿಯಾದ ಮೀನುಗಾರಿಕೆ ನಡೆದಿದೆ ಮೀನಿನ ಲಭ್ಯತೆ ಕಡಿಮೆಯಾಗಿದೆ. 
 

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!