Puneeth Song: ನಟ ಪುನೀತ್ ನೆಚ್ಚಿನ ಹಾಡು ಹೇಳಿ ಶಿಕ್ಷಕರಿಗೆ ವಿಶೇಷ ಬೀಳ್ಕೊಡಿಗೆ

Dec 7, 2021, 8:54 PM IST

ವಿಜಯನಗರ, (ಡಿ.07):  ಕರ್ನಾಟಕ ರತ್ನ' ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ತಿಂಗಳೇ ಕಳೆದಿದೆ. ಆದರೆ ಅವರ ನೆನಪು ಮಾತ್ರ ಎಂದಿಗೂ ಶಾಶ್ವತ. ದೇಶ-ವಿದೇಶಗಳಲ್ಲಿ ಅಸಂಖ್ಯಾತ ಅಪ್ಪು ಅಭಿಮಾನಿಗಳು, ಇಂದೂ ತಮ್ಮ ನೆಚ್ಚಿನ ನಟನ ಅಗಲಿಕೆ ನೋವಿನಲ್ಲಿದ್ದಾರೆ. ಕೆಲವು ಕಡೆ ಅವರ ಅಭಿಮಾನಿಗಳು ಪುನೀತ್ ಹೆಸರಲ್ಲಿ ಸಮಾಜಮುಖಿ ಕೈಂಕರ್ಯ ಮಾಡುತ್ತಾ ಬರುತ್ತಿದ್ದಾರೆ.

Gandhada Gudi Teaser: ಅಮ್ಮನ ಹುಟ್ಟು ಹಬ್ಬದ ದಿನ ಪುನೀತ್ ಕನಸು ನನಸು!

ಈ ಪೈಕಿ ವಿಜಯನಗರ ಜಿಲ್ಲೆಯಲ್ಲಿ ನಟ ಪುನೀತ್ ನೆಚ್ಚಿನ ಹಾಡು ಹೇಳಿ ಶಿಕ್ಷಕರಿಗೆ ವಿಶೇಷ ಬೀಳ್ಕೊಡಲಾಗಿದೆ.  ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆ ಹೇಳಿದೆ ಎಂಬ ಸಾಂಗ್ ಹೇಳಿ‌ ಬೀಳ್ಕೊಡಲಾಯ್ತು. ಹಾಡು ಕೇಳ್ತಿದ್ದಂತೆ  ಶಿಕ್ಷಕರ ಕಣ್ಣಲ್ಲಿ ನೀರು ತುಂಬಿಬಂದವು. ಶಿಕ್ಷಕರ ಕಣ್ಣೀರು ನೋಡಿ ವಿದ್ಯಾರ್ಥಿಗಳು ಸಹ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.