ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?

ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?

Published : May 16, 2025, 05:30 PM IST

ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್​ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್​​ ಗುರೂಜಿಯೇ ಈ ಗ್ಯಾಂಗ್​ ಮಾಡಿದ್ದ ಡೀಲ್​ ಕಹನಿಯನ್ನ ಹೇಳಿದ್ದಾರೆ. 

ಅವರು ಖ್ಯಾತ ಜ್ಯೋತಿಷಿ, ವಾಸ್ತು ಶಿಲ್ಪಿ... ಬೆಳಗ್ಗೆ ಆಗ್ತಿದ್ದಂತೆ ಖಾಸಗಿ ಚಾನಲ್​ನಲ್ಲಿ ಬಂದು ತಮ್ಮ ಫಾಲೋವರ್ಸ್​​ ಮತ್ತು ಭಕ್ತರಿಗೆ ಸಲಹೆಗಳನ್ನ ಮತ್ತು ಸೂಚನೆಗಳನ್ನ ಕೊಡುತ್ತಿದ್ದವರು. ಅವರಿಗೆ ರಾಜ್ಯದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಮಾತುಗಳನ್ನೇ ವೇದವಾಖ್ಯವನ್ನಾಗಿ ಮಾಡಿಕೊಂಡು ಅವರು ಹೇಳಿದಂತೆ ಕೇಳುವ ಭಕ್ತರಿದ್ದಾರೆ. ಆದ್ರೆ ಇವತ್ತು ಇದೇ ಗುರೂಜಿ ಪೊಲೀಸ್​​ ಠಾಣೆ ಮೆಟ್ಟಿಲ್ಲೇರಿದ್ದಾರೆ. ನನಗೆ ಮೋಸವಾಗಿದೆ. ನನ್ನನ್ನ ಬ್ಲ್ಯಾಕ್​ ಮೇಲ್​ ಮಾಡ್ತಿದ್ದಾರೆ. ನನ್ನ ವಿಡಿಯೋ ಇದೆ ಅಂತ ಹೆದರಿಸುತ್ತಿದ್ದಾರೆ ಅಂತ ಕಂಪ್ಲೆಂಟ್​​ ದಾಖಲಿಸಿದ್ದಾರೆ. ಹಾಗಾದ್ರೆ ಬ್ಲ್ಯಾಕ್​ಮೇಲ್​ ಬಲೆಗೆ ಬಿದ್ದಿರುವ ಆ ಖ್ಯಾತ ಗುರೂಜಿ ಯಾರು? ಅವರಿಗೆ ಬೆದರಿಕೆಗಳನ್ನ ಹಾಕುತ್ತಿರುವವರು ಯಾರು..? ಇಡೀ ರಾಜ್ಯವೇ ಬೆಚ್ಚಿ ಬೀಳೋ ಸ್ಟೋರಿಯೇ ಇವತ್ತಿನ ಎಫ್​​​.ಐ.ಆರ್​​. 

ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್​ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್​​ ಗುರೂಜಿಯೇ ಈ ಗ್ಯಾಂಗ್​ ಮಾಡಿದ್ದ ಡೀಲ್​ ಕಹನಿಯನ್ನ ಹೇಳಿದ್ದಾರೆ. ಅದೊಂದು ಗ್ಯಾಂಗ್​​​​​ ತನ್ನ ಪಾಡಿಗಿದ್ದ ಗುರೂಜಿಯನ್ನ ಅಡ್ಡಗಟ್ಟಿ ನಿನ್ನ ಸಿಡಿ ನನ್ನ ಬಳಿ ಇದೆ. ಡೀಲ್​ ಮಾಡಿಕೊಂಡ್ರೆ ಆ ವಿಡಿಯೋ ಡಿಲೀಟ್​ ಆಗುತ್ತೆ ಅಂತ ಹೆಳಿದ್ದರಂತೆ. ಅಷ್ಟೇ ಅಲ್ಲ ಗುರೂಜಿಯ ಆಶ್ರಮದ ಜಾಗದ ಬಗ್ಗೆಯೂ ಮಾತನ್ನಾಡಿದ್ರಂತೆ. ಇದೇ ವಿಷಯವನ್ನಿಟ್ಟುಕೊಂಡು ಆ ಗ್ಯಾಂಗ್​ ಯೂಟ್ಯೂಬ್​ ಚಾನಲ್​​​ನಲ್ಲಿ ಗುರೂಜಿ ಬಗ್ಗೆ ಸಾಲು ಸಾಲು ಎಪಿಸೋಡ್​ಗಳನ್ನ ಮಾಡಿದ್ರಂತೆ. 

ದುಡ್ಡಿಗೆ ಬೇಡಿಕೆ ಕೂಡ ಇಟ್ಟಿದ್ರಂತೆ. ಆದ್ರೆ ಯಾವಾಗ ತಮ್ಮ ಬಗ್ಗೆ ವಿಡಿಯೋಗಳು ಹರಿದಾಡೋಕೆ ಶುರುವಾಯ್ತೋ ಗುರೂಜಿ ಸ್ಟೇ ಆರ್ಡರ್​​ ತಂದಿದ್ರು. ಆಗ ಆ ಗ್ಯಾಂಗ್​ ಬೇರೆ ಹೆರುಗಳಲ್ಲಿ ಚಾನಲ್​ ಮಾಡಿಕೊಂಡು ಮತ್ತೆ ಸುದ್ದಿ ಪ್ರಸಾರ ಮಾಡೋದಕ್ಕೆ ಶುರು ಮಾಡಿದ್ರು. ನಿರಂತರವಾದ ಬ್ಲ್ಯಾಕ್​ಮೇಲ್​ ಅನ್ನ ತಡೆದುಕೊಂಡಿದ್ದ ಆನಂದ್​​ ಗುರೂಜಿ ಕೊನೆಗೆ ಪೊಲೀಸ್​ ಠಾಣೆಗೆ ಹೋಗಿ ಕೂತುಬಿಟ್ಟರು. ಎಲುಬಿಲ್ಲದ ನಾಲಗೆ ಏನ್​ ಬೇಕಾದ್ರೂ ಮಾತನ್ನಾಡಿಸುತ್ತೆ ಅನ್ನೋದಕ್ಕೆ ಈಕೆಯ ಈ ಮಾತುಗಳೇ ಸಾಕ್ಷಿ. ಪತ್ರಕರ್ತೆ ಅಂತ ಮುಖವಾಡ ಹಾಕಿಕೊಂಡು ಮಾಡಬಾರದ ಕೆಲಸ ಮಾಡಿ ಈಗ ಪತ್ರಕರ್ತರ ಮೇಲೆಯೇ ಆರೋಪ ಮಾಡುತ್ತಿರುವ ಈಕೆಗೆ ಆ ದೇವರು ಒಳ್ಳೆಯ ಬುದ್ಧಿ ಕರುಣಿಸಲಿ.. ಹಾಗೇ ಈ ಕೇಸ್​​ನಲ್ಲಿ ಯಾರದ್ದು ತಪ್ಪಿದೆ ಅನ್ನೋದು ತನಿಖೆಯಿಂದ ಹೊರಗೆ ಬರಲಿ ಅಂತ ಹೇಳ್ತಾ ಇವತ್ತಿನ ಎಪಿಸೋಡ್​​ ಮುಗಿಸುತ್ತಿದ್ದೇನೆ.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more