ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?

ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?

Published : May 16, 2025, 05:30 PM IST

ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್​ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್​​ ಗುರೂಜಿಯೇ ಈ ಗ್ಯಾಂಗ್​ ಮಾಡಿದ್ದ ಡೀಲ್​ ಕಹನಿಯನ್ನ ಹೇಳಿದ್ದಾರೆ. 

ಅವರು ಖ್ಯಾತ ಜ್ಯೋತಿಷಿ, ವಾಸ್ತು ಶಿಲ್ಪಿ... ಬೆಳಗ್ಗೆ ಆಗ್ತಿದ್ದಂತೆ ಖಾಸಗಿ ಚಾನಲ್​ನಲ್ಲಿ ಬಂದು ತಮ್ಮ ಫಾಲೋವರ್ಸ್​​ ಮತ್ತು ಭಕ್ತರಿಗೆ ಸಲಹೆಗಳನ್ನ ಮತ್ತು ಸೂಚನೆಗಳನ್ನ ಕೊಡುತ್ತಿದ್ದವರು. ಅವರಿಗೆ ರಾಜ್ಯದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಮಾತುಗಳನ್ನೇ ವೇದವಾಖ್ಯವನ್ನಾಗಿ ಮಾಡಿಕೊಂಡು ಅವರು ಹೇಳಿದಂತೆ ಕೇಳುವ ಭಕ್ತರಿದ್ದಾರೆ. ಆದ್ರೆ ಇವತ್ತು ಇದೇ ಗುರೂಜಿ ಪೊಲೀಸ್​​ ಠಾಣೆ ಮೆಟ್ಟಿಲ್ಲೇರಿದ್ದಾರೆ. ನನಗೆ ಮೋಸವಾಗಿದೆ. ನನ್ನನ್ನ ಬ್ಲ್ಯಾಕ್​ ಮೇಲ್​ ಮಾಡ್ತಿದ್ದಾರೆ. ನನ್ನ ವಿಡಿಯೋ ಇದೆ ಅಂತ ಹೆದರಿಸುತ್ತಿದ್ದಾರೆ ಅಂತ ಕಂಪ್ಲೆಂಟ್​​ ದಾಖಲಿಸಿದ್ದಾರೆ. ಹಾಗಾದ್ರೆ ಬ್ಲ್ಯಾಕ್​ಮೇಲ್​ ಬಲೆಗೆ ಬಿದ್ದಿರುವ ಆ ಖ್ಯಾತ ಗುರೂಜಿ ಯಾರು? ಅವರಿಗೆ ಬೆದರಿಕೆಗಳನ್ನ ಹಾಕುತ್ತಿರುವವರು ಯಾರು..? ಇಡೀ ರಾಜ್ಯವೇ ಬೆಚ್ಚಿ ಬೀಳೋ ಸ್ಟೋರಿಯೇ ಇವತ್ತಿನ ಎಫ್​​​.ಐ.ಆರ್​​. 

ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್​ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್​​ ಗುರೂಜಿಯೇ ಈ ಗ್ಯಾಂಗ್​ ಮಾಡಿದ್ದ ಡೀಲ್​ ಕಹನಿಯನ್ನ ಹೇಳಿದ್ದಾರೆ. ಅದೊಂದು ಗ್ಯಾಂಗ್​​​​​ ತನ್ನ ಪಾಡಿಗಿದ್ದ ಗುರೂಜಿಯನ್ನ ಅಡ್ಡಗಟ್ಟಿ ನಿನ್ನ ಸಿಡಿ ನನ್ನ ಬಳಿ ಇದೆ. ಡೀಲ್​ ಮಾಡಿಕೊಂಡ್ರೆ ಆ ವಿಡಿಯೋ ಡಿಲೀಟ್​ ಆಗುತ್ತೆ ಅಂತ ಹೆಳಿದ್ದರಂತೆ. ಅಷ್ಟೇ ಅಲ್ಲ ಗುರೂಜಿಯ ಆಶ್ರಮದ ಜಾಗದ ಬಗ್ಗೆಯೂ ಮಾತನ್ನಾಡಿದ್ರಂತೆ. ಇದೇ ವಿಷಯವನ್ನಿಟ್ಟುಕೊಂಡು ಆ ಗ್ಯಾಂಗ್​ ಯೂಟ್ಯೂಬ್​ ಚಾನಲ್​​​ನಲ್ಲಿ ಗುರೂಜಿ ಬಗ್ಗೆ ಸಾಲು ಸಾಲು ಎಪಿಸೋಡ್​ಗಳನ್ನ ಮಾಡಿದ್ರಂತೆ. 

ದುಡ್ಡಿಗೆ ಬೇಡಿಕೆ ಕೂಡ ಇಟ್ಟಿದ್ರಂತೆ. ಆದ್ರೆ ಯಾವಾಗ ತಮ್ಮ ಬಗ್ಗೆ ವಿಡಿಯೋಗಳು ಹರಿದಾಡೋಕೆ ಶುರುವಾಯ್ತೋ ಗುರೂಜಿ ಸ್ಟೇ ಆರ್ಡರ್​​ ತಂದಿದ್ರು. ಆಗ ಆ ಗ್ಯಾಂಗ್​ ಬೇರೆ ಹೆರುಗಳಲ್ಲಿ ಚಾನಲ್​ ಮಾಡಿಕೊಂಡು ಮತ್ತೆ ಸುದ್ದಿ ಪ್ರಸಾರ ಮಾಡೋದಕ್ಕೆ ಶುರು ಮಾಡಿದ್ರು. ನಿರಂತರವಾದ ಬ್ಲ್ಯಾಕ್​ಮೇಲ್​ ಅನ್ನ ತಡೆದುಕೊಂಡಿದ್ದ ಆನಂದ್​​ ಗುರೂಜಿ ಕೊನೆಗೆ ಪೊಲೀಸ್​ ಠಾಣೆಗೆ ಹೋಗಿ ಕೂತುಬಿಟ್ಟರು. ಎಲುಬಿಲ್ಲದ ನಾಲಗೆ ಏನ್​ ಬೇಕಾದ್ರೂ ಮಾತನ್ನಾಡಿಸುತ್ತೆ ಅನ್ನೋದಕ್ಕೆ ಈಕೆಯ ಈ ಮಾತುಗಳೇ ಸಾಕ್ಷಿ. ಪತ್ರಕರ್ತೆ ಅಂತ ಮುಖವಾಡ ಹಾಕಿಕೊಂಡು ಮಾಡಬಾರದ ಕೆಲಸ ಮಾಡಿ ಈಗ ಪತ್ರಕರ್ತರ ಮೇಲೆಯೇ ಆರೋಪ ಮಾಡುತ್ತಿರುವ ಈಕೆಗೆ ಆ ದೇವರು ಒಳ್ಳೆಯ ಬುದ್ಧಿ ಕರುಣಿಸಲಿ.. ಹಾಗೇ ಈ ಕೇಸ್​​ನಲ್ಲಿ ಯಾರದ್ದು ತಪ್ಪಿದೆ ಅನ್ನೋದು ತನಿಖೆಯಿಂದ ಹೊರಗೆ ಬರಲಿ ಅಂತ ಹೇಳ್ತಾ ಇವತ್ತಿನ ಎಪಿಸೋಡ್​​ ಮುಗಿಸುತ್ತಿದ್ದೇನೆ.

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
Read more