ಫುಡ್‌ ಫೆಸ್ಟಿವಲ್‌ ಮೇಳಕ್ಕೆ ಶಾಸಕ ಶ್ರೀವತ್ಸ ಚಾಲನೆ: ಮೂರು ದಿನ ನಡೆಯುವ ಸುವರ್ಣ ದಸರ ಸಂಭ್ರಮ

Oct 2, 2023, 11:20 AM IST

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡ ಪ್ರಭವತಿಯಿಂದ ಆಯೋಜಿಸಲಾದ ಸುವರ್ಣ ದಸರ ಕಾರ್ಯಕ್ರಮಕ್ಕೆ(Suvarna Dasara program) ಚಾಲನೆ ನೀಡಲಾಗಿದೆ. ಅರಸು ಫೌಂಡೇಷನ್‌ ಶಾಲೆಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಶಾಸಕ ಶ್ರೀವತ್ಸ ಚಾಲನೆ ನೀಡಿದರು. ನಟ, ನಿರ್ದೇಶಕ ಪ್ರಥಮ್‌ ಸೇರಿ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನೂ ಈ ಮೇಳದಲ್ಲಿ 50ಕ್ಕೂ ಹೆಚ್ಚು ಆಹಾರ(Food) ಮಳಿಗೆಗಳನ್ನು ತೆರೆಯಲಾಗಿದೆ. ಉತ್ತರ, ದಕ್ಷಿಣ ಭಾರತದ ಬಗೆಬಗೆಯ ತಿಂಡಿ ತಿನಿಸುಗಳು ಮಾರಾಟಕ್ಕೆ ಇವೆ. ವೀಕೆಂಡ್‌ ಮಸ್ತಿಗೆ ಇದು ಹೇಳಿ ಮಾಡಿಸಿದ ಕಾರ್ಯಕ್ರಮವಾಗಿದೆ. ಇಂದು ಯೋಗರಾಜ್‌ ಭಟ್‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ವೀಕ್ಷಿಸಿ:  ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಹೈಟೆಕ್ ಟಚ್: ಇನ್ಮುಂದೆ ಪಾರ್ಕಿಂಗ್ ಸಮಸ್ಯೆಗೆ ಗುಡ್ ಬೈ