ಬೆಂಗ್ಳೂರಲ್ಲಿ ನಿಲ್ಲದ ಬೀದಿ ನಾಯಿ ಹಾವಳಿ, ಶಾಲಾ ವಿದ್ಯಾರ್ಥಿ ಮೇಲೆ ದಾಳಿ: ಜನ್ರಿಗಿಲ್ಲ ಸುರಕ್ಷತೆಯ ಗ್ಯಾರಂಟಿ?

ಬೆಂಗ್ಳೂರಲ್ಲಿ ನಿಲ್ಲದ ಬೀದಿ ನಾಯಿ ಹಾವಳಿ, ಶಾಲಾ ವಿದ್ಯಾರ್ಥಿ ಮೇಲೆ ದಾಳಿ: ಜನ್ರಿಗಿಲ್ಲ ಸುರಕ್ಷತೆಯ ಗ್ಯಾರಂಟಿ?

Published : Dec 12, 2024, 06:54 PM IST

ಮಕ್ಕಳನ್ನ ಸ್ಕೂಲಿಗೆ ಕಳುಹಿಸಲು ಕೂಡ ಕಷ್ಟವಾಗ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಟ್ರು ಯಾವುದೇ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳಿಂದ ನಮ್ಮನ್ನ ರಕ್ಷಣೆ ಮಾಡಿ ಅಂತ ಬಿಬಿಎಂಪಿಗೆ ಕನಕನಗರದ ನಿವಾಸಿಗಳ ಮನವಿ ಮಾಡಿಕೊಂಡಿದ್ದಾರೆ. 

ಬೆಂಗಳೂರು(ಡಿ.12): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿವೆ ರಕ್ಕಸ ನಾಯಿಗಳು ಮಕ್ಕಳನ್ನೇ ಟಾರ್ಗೆಟ್ ಮಾಡಿವೆ. ಈ ಬಗ್ಗೆ  ಬಿಬಿಎಂಪಿಗೆ ದೂರು‌ ನೀಡಿದ್ರು‌ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆಯಿಂದ ‌ಮಕ್ಕಳನ್ನ ಹೊರಗಡೆ ಕಳುಹಿಸಲು ಪೋಷಕರು ಭಯ ಪಡುತ್ತಿದ್ದಾರೆ. ಸುಲ್ತಾನ್ ಪಾಳ್ಯ, ಕನಕನಗರದ 6 ನೇ ಎ ಕ್ರಾಸ್ ನಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಬೀದಿ ನಾಯಿಗಳ‌ ಕಾಟಕ್ಕೆ ಜನರು ಹೈರಾಣಾಗಿದ್ದಾರೆ. 

ಡೆಡ್ಲಿ‌ ನಾಯಿಗಳು ಮಕ್ಕಳು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಮೂರು ಜನರನ್ನ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇಮ್ರಾನ್ ಎಂಬುವರ ಮಕ್ಕಳಿಗೆ ನಾಯಿ ಕಚ್ಚಿದೆ.  ಇದು ಎರಡನೇ ಬಾರಿಗೆ ನನ್ನ ಮಗನಿಗೆ ಬೀದಿ ನಾಯಿ ಕಚ್ಚಿದೆ ಎಂದು ಇಮ್ರಾನ್ ತಿಳಿಸಿದ್ದಾರೆ. 

ಆಸ್ಪತ್ರೆಯಲ್ಲಿ ದರ್ಶನ್ ಹೈಡ್ರಾಮಾ! ಮಧ್ಯಂತರ ಜಾಮೀನು ವಿಸ್ತರಣೆಯಾಗುತ್ತಿದ್ದಂತೆ ಕಳ್ಳಾಟ!

ಸಂಜೆ ಹಾಗೂ ‌ಬೆಳಿಗ್ಗೆ ನಾಯಿಗಳ ಕಾಟ ಹೆಚ್ಚಿದೆ. ನಾಯಿ ಕಾಟದ ಬಗ್ಗೆ ‌ಬಿಬಿಎಂಪಿಗೆ ದೂರು ಸಹ ಕೊಡಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ‌ಮೂವರಿಗೆ ನಾಯಿ ಕಚ್ಚಿದೆ. ಆದ್ರೆ ಪಕ್ಕದ ಮನೆಯವರು ಬೀದಿ ನಾಯಿಗಳಿಗೆ ಊಟ ಹಾಕ್ತಾರೆ. ನಾಯಿಗಳಿಂದ ತೊಂದರೆ ಬಗ್ಗೆ ಅವರ ಗಮನಕ್ಕೂ ತರಲಾಗಿದೆ. ಆದ್ರೆ ಇದ್ಯಾವುದನ್ನ ಲೆಕ್ಕಿಸದೆ ಬೀದಿ ನಾಯಿಗಳಿಗೆ ಊಟ ಹಾಕೋದನ್ನ ನಿಲ್ಲಿಸಿಲ್ಲ. ನಾಯಿಗಳಿಂದ ಜನರಿಗೆ ತೊಂದರೆ ಆಗ್ತಿದೆ ಅಂದ್ರೂ ಕೂಡ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ‌ಮಕ್ಕಳನ್ನ ಸ್ಕೂಲಿಗೆ ಕಳುಹಿಸಲು ಕೂಡ ಕಷ್ಟವಾಗ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಟ್ರು ಯಾವುದೇ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳಿಂದ ನಮ್ಮನ್ನ ರಕ್ಷಣೆ ಮಾಡಿ ಅಂತ ಬಿಬಿಎಂಪಿಗೆ ಕನಕನಗರದ ನಿವಾಸಿಗಳ ಮನವಿ ಮಾಡಿಕೊಂಡಿದ್ದಾರೆ. 

23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
Read more