ಕನ್ನಡಿಗರ ಮನಗೆದ್ದ ಖ್ಯಾತ ಗಾಯಕ: ಕನ್ನಡ ಕೋಗಿಲೆ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ !

ಕನ್ನಡಿಗರ ಮನಗೆದ್ದ ಖ್ಯಾತ ಗಾಯಕ: ಕನ್ನಡ ಕೋಗಿಲೆ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ !

Published : Aug 12, 2023, 10:20 AM IST

ಗಾನಕೋಗಿಲೆಯ ಇಂಪಾದ ಗಾನಸುಧೆಗೆ ತಲೆ ದೂಗದವರೇ ಇಲ್ಲ. ಜಾನಪದ ಕಲಾವಿದ ಮಹೇಶ್ ಕಂಠ ಸಿರಿಗೆ ಕೋಟ್ಯಂತರ ಕನ್ನಡಿಗರು ತಲೆ ದೂಗಿ ಮೆಚ್ಚಿಕೊಂಡಿದ್ದಾರೆ. ಆದ್ರೀಗ ಇವರದ್ದೇ ಸಮುದಾಯ ಮಹೇಶ್ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ ವಿಧಿಸಿದೆ.

ಚಾಮರಾಜನಗರದ ರಾಮಸಮುದ್ರದ ನಿವಾಸಿ ಗಾಯಕ ಮಹೇಶ್ ದಲಿತ  ಸಮುದಾಯದಕ್ಕೆ ಸೇರಿದವರು. ದಲಿತ ಸಮುದಾಯಕ್ಕೆ(Dalit community) ಮೇಲ್ವರ್ಗದವರಿಂದ ಬಹಿಷ್ಕಾರದಂತ ಶಿಕ್ಷೆಗಳನ್ನು ಕೇಳಿದ್ದೇವೆ. ಆದ್ರಿಲ್ಲಿ ದಲಿತ ಸಮುದಾಯದವರೇ ಗಾಯಕ ಮಹೇಶ್(singer Mahesh) ಕುಟುಂಬ ಸೇರಿದಂತೆ ನಾಲ್ಕು ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ ವಿಧಿಸಿವೆ. ಸಮಾರಂಭವೊಂದರಲ್ಲಿ ನನ್ನನ್ನು ಸನ್ಮಾನಿಸಲು ಗ್ರಾಮಸ್ಥರು ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದ್ರು. ಆದರೆ ಯಜಮಾನರು ನನ್ನ ಹೆಸರನ್ನು ತೆಗೆಸಿ ಅವಮಾನಿಸಿದ್ರು ಎನ್ನುತ್ತಿದ್ದಾರೆ ಕನ್ನಡದ ಕೋಗಿಲೆ(Kannada kogile) ಖ್ಯಾತಿಯ ಮಹೇಶ್. ಕಳೆದ ನಾಲ್ಕು ವರ್ಷಗಳಿಂದ ನಿವೇಶ ವಿವಾದ ವಿಚಾರವಾಗಿ ಈ ಕುಟುಂಬಗಳು ಪೊಲೀಸ್ ಠಾಣೆಗೆ  ದೂರು ನೀಡಿ ನ್ಯಾಯಾಲಯದ ಮೆಟ್ಟಿಲೇರಿದ್ದವು. ಆದ್ರೆ ಈ ವಿವಾದದ ಬಗ್ಗೆ ಯಜಮಾನರು ನ್ಯಾಯಪಂಚಾಯ್ತಿ ನಡೆಸಲು ಮುಂದಾಗಿದ್ರಂತೆ. ಆಗ ನ್ಯಾಯಾಲಯದಲ್ಲೇ ತೀರ್ಮಾನವಾಗಲಿ ಎಂದು ಈ ಕುಟುಂಬಗಳು ಹೇಳಿದ್ದಾರಂತೆ. ಇದರಿಂದ ಸಿಟ್ಟಾದ ಯಜಮಾನರು 6 ಸಾವಿರ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರಂತೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ವೃಶ್ಚಿಕ ರಾಶಿಯವರು ಧೈರ್ಯ, ಸಾಹಸವನ್ನು ತೋರುತ್ತಾರೆ, ವೃತ್ತಿಯಲ್ಲಿ ಕಿರಿಕಿರಿ

24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!