Shivamogga: ಕೊನೆಗೂ ತುಮರಿಗೆ ಬಂತು ಆ್ಯಂಬುಲೆನ್ಸ್, ಮಾತು ಉಳಿಸಿಕೊಂಡ ಶಾಸಕ

Shivamogga: ಕೊನೆಗೂ ತುಮರಿಗೆ ಬಂತು ಆ್ಯಂಬುಲೆನ್ಸ್, ಮಾತು ಉಳಿಸಿಕೊಂಡ ಶಾಸಕ

Published : Jan 11, 2022, 04:32 PM ISTUpdated : Jan 11, 2022, 04:50 PM IST

ಶರಾವತಿ (Sharawathi Backwater) ನದಿ ಹಿನ್ನೀರಿನ ಪ್ರದೇಶದಲ್ಲಿ ವಾಸಿಸುವ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಇಲ್ಲಿನ ಜನರಿಗೆ  ಕೊಟ್ಟ ಮಾತನ್ನು  ಉಳಿಸಿಕೊಂಡಿದ್ದಾರೆ. ಊರಿಗೆ ಹೊಚ್ಚ ಹೊಸ 108  ಅಂಬ್ಯುಲೆನ್ಸ್ ಬಂದಿದೆ.  

 ಶಿವಮೊಗ್ಗ (ಜ. 11):  ಸಾಗರ ತಾಲೂಕಿನ ಕರೂರು ಮತ್ತು ಬಾರಂಗಿ ಹೋಬಳಿಯ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಂಡು ಇಲ್ಲಿನ ಜನ ತುಂಬಾ ಕಷ್ಟ ಅನುಭವಿಸುವಂತಾಗಿತ್ತು.  ತುರ್ತು ಸಂದರ್ಭದಲ್ಲಿ 108 ಸೇವೆ ಲಭ್ಯವಿಲ್ಲದೇ ಹಿನ್ನೀರಿನ 8 ಪಂಚಾಯತ್ ವ್ಯಾಪ್ತಿಯ ಸುಮಾರು 20 ಸಾವಿರ ಜನರಿಗೆ ಇಲ್ಲ ತುರ್ತು ಸೇವೆ ಸಿಗದಂತಾಗಿತ್ತು. 

ಸುಮಾರು ಒಂದು ತಿಂಗಳ ಹಿಂದಿನಿಂದ ಅಂಬ್ಯುಲೆನ್ಸ್ ವಾಹನ ಕೆಟ್ಟು ನಿಂತಿತ್ತು.   ದುರಸ್ತಿ ಕಾಣದೇ ಸೇವೆಯೇ ಸ್ಥಗಿತಗೊಂಡಿತ್ತು. ಅಂಬ್ಯಲೆನ್ಸ್ ಇಲ್ಲದ ಕಾರಣಕ್ಕೆ ಆಗಬಾರದ ಅನಾಹುತಗಳೂ ನಡೆದು ಹೋದುವು. ಒಂದು ಘಟನೆಯಲ್ಲಿ  ಹಸುಗೂಸು ಕಣ್ಣು ಬಿಡುವ ಮೊದಲೇ ಇಹಲೋಕ ಯಾತ್ರೆ ಮುಗಿಸಿದರೆ, ಮತ್ತೊಂದು ಘಟನೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ಸಾಗರ ಅಸ್ಪತ್ರೆಗೆ ಸಾಗಿಸಲು ಜನ ಪರದಾಡಬೇಕಾಯಿತು. ಇದರಿಂದಾಗಿ ಕರೂರು ಹೋಬಳಿಯ ಜನತೆ ಹೊಸ ಅಂಬ್ಯುಲೆನ್ಸ್ ಗಾಗಿ ಪ್ರತಿಭಟನೆ ನಡೆಸಿದ್ದರು. ಶಾಸಕರು ತಾತ್ಕಾಲಿಕವಾಗಿ ವೆಂಟಿಲೇಟರ್ ಇಲ್ಲದ ಅಂಬ್ಯುಲೆನ್ಸ್ ನೀಡಿದ್ದರೂ ಜನ ಅದನ್ನು ನಿರಾಕರಿಸಿದ್ದರು,  ಹೊಸ ಅಂಬ್ಯುಲೆನ್ಸ್ ಬೇಕು ಎಂದು ಆಗ್ರಹಿಸಿದ್ದ ಹಿನ್ನೆಲೆ, ಶಾಸಕ ಹಾಲಪ್ಪ  ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

ಈಗ ಶರಾವತಿ ನದಿ ಹಿನ್ನೀರಿನ ಪ್ರದೇಶದಲ್ಲಿ ವಾಸಿಸುವ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಇಲ್ಲಿನ ಜನರಿಗೆ  ಕೊಟ್ಟ ಮಾತನ್ನು  ಉಳಿಸಿಕೊಂಡಿದ್ದಾರೆ. ಊರಿಗೆ ಹೊಚ್ಚ ಹೊಸ 108  ಅಂಬ್ಯುಲೆನ್ಸ್ ಬಂದಿದೆ.  ಸಾಗರ ತಾಲೂಕಿನ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಮಂಜೂರಾಗಿದ್ದು,  ನೂತನವಾದ ಸುಸಜ್ಜಿತ, ಅತ್ಯಾಧುನಿಕ 108 ಆಂಬುಲೆನ್ಸ್ ವಾಹನಕ್ಕೆ ಶಾಸಕರು ಚಾಲನೆ ನೀಡಿದ್ದಾರೆ.

 

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more