ಯಾದಗಿರಿ: ಲಸಿಕೆ ಪಡೆಯಲು ಜನರ ಹಿಂದೇಟು, ವ್ಯಾಕ್ಸಿನ್‌ ಡ್ರೈವ್‌ ಹೆಚ್ಚಿಸಲು ಹರಸಾಹಸ

Aug 19, 2021, 12:34 PM IST

ಯಾದಗಿರಿ(ಆ.19): ಕೋವಿಡ್‌ ಲಸಿಕೆ ಹಾಕಿಸಿಕೊಂಡರೆ ಜ್ವರ ಬಂದು ಸಾಯುತ್ತಾರೆ ಅಂತ ಅಪಪ್ರಚಾರ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹೀಗಾಗಿ ವ್ಯಾಕ್ಸಿನ್‌ ಡ್ರೈವ್‌ ಹೆಚ್ಚಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಮನೆ ಮನೆಗೂ ತೆರಳಿ ಲಸಿಕೆ ನೀಡಿದ್ರೂ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ನೀಡಲು ಬರುವ ಆರೋಗ್ಯ ಸಿಬ್ಬಂದಿ ಕಂಡು ಎದ್ನೋ ಬಿದ್ನೋ ಅಂತ ಜನರು ಓಡೋಡಿ ಹೋಗುತ್ತಿದ್ದಾರೆ. ನಮಗೆ ಲಸಿಕೆ ಬೇಡವೇ ಬೇಡ ಅಂತ ಜನರು ಹೈಡ್ರಾಮ ಮಾಡುತ್ತಿದ್ದಾರೆ. 

ಕಲಬುರಗಿ: ನಿವೃತ್ತ ಯೋಧರಿಗೆ ಭರ್ಜರಿ ಸ್ವಾಗತ