ಗ್ಯಾರಂಟಿ ಯೋಜನೆಗಾಗಿ ಪೆಟ್ರೋಲ್ ಬೆಲೆ ಏರಿಸಿದ್ರಾ..? ಎಡವಟ್ಟಿಗೆಲ್ಲಾ ಗ್ಯಾರಂಟಿನೇ ಕಾರಣನಾ..?

ಗ್ಯಾರಂಟಿ ಯೋಜನೆಗಾಗಿ ಪೆಟ್ರೋಲ್ ಬೆಲೆ ಏರಿಸಿದ್ರಾ..? ಎಡವಟ್ಟಿಗೆಲ್ಲಾ ಗ್ಯಾರಂಟಿನೇ ಕಾರಣನಾ..?

Published : Jun 17, 2024, 05:55 PM ISTUpdated : Jun 17, 2024, 06:01 PM IST

ಧಿಡೀರ್ ಪೆಟ್ರೋಲ್,ಡೀಸಲ್ ಬೆಲೆ ಏರಿದ್ಯಾಕೆ?
ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಜನ!
ಬೆಲೆ ಏರಿಕೆ ವಿರುದ್ಧ ತಿರುಗಿಬಿದ್ದ ಕಮಲಪಡೆ!

ಜನರಲ್ ಎಲೆಕ್ಷನ್ ಮುಗಿದಿದ್ದೇ ಮುಗಿದಿದ್ದು, ಶ್ರೀಸಾಮಾನ್ಯನ ಜೇಬು ಸುಡೋಕೆ ಶುರುವಾಗಿದೆ. ಆದ್ರೆ ಈ ಸಮಸ್ಯೆ ಕಾಡ್ತಾ ಇರೋದು ಸಧ್ಯಕ್ಕೆ ಕರ್ನಾಟಕದ ಜನರನ್ನ ಮಾತ್ರ. ಯಾಕಂದ್ರೆ, ಗ್ಯಾರಂಟಿ ಯೋಜನೆಗೆ(Guarantee scheme) ದುಡ್ಡು ಜೋಡಿಸೋಕೆ ಗಾಯದ ಮೇಲೆ ಬರೆ ಎಳೆಯೋಕೆ ಮುಂದಾದಂತಿದೆ, ಸಿದ್ದರಾಮಯ್ಯನೋರ(Siddaramaiah) ಸರ್ಕಾರ.ಸರಿಸುಮಾರ 30% ಪೆಟ್ರೋಲ್ ಬೆಲೆ(Petrol-diesel prices hike) ಏರಿಕೆಯಾಗಿದೆ. ಇಷ್ಟೇ ಅಲ್ಲ, ಇನ್ನೂ ಶಾಕ್ ಮೇಲೆ ಶಾಕ್ ಕಾದಿದೆ ಅನ್ನೋ ಭಯಾನಕ ಭವಿಷ್ಯ ಬೇರೆ ಕೇಳುಸ್ತಾ ಇದೆ. ರಾಜ್ಯದಲ್ಲಿ ಸರ್ಕಾರ(State government) ನಡೆಸ್ತಾ ಇರೋದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್. ಈ ಕಾಂಗ್ರೆಸ್ ಆಡಳಿತಕ್ಕೆ ಬರೋದ್ರಲ್ಲಿ, ಅತಿ ಮಹತ್ವದ ಪಾತ್ರವಹಿಸಿದ ಸಂಗತಿ ಏನು ಅಂತ ಕೇಳಿದ್ರೆ, ಅನೇಕ ಮಂದಿ ಹೇಳೋದೇ, ಗ್ಯಾರಂಟಿ ಘೋಷಣೆ ಅಂತ. ರಾಜ್ಯದ ಜನಕ್ಕೆ ಗ್ಯಾರಂಟಿ ಭರವಸೆ ಕೊಡೋ ಮೂಲಕ, ಕಾಂಗ್ರೆಸ್ ಹೊಸ ಅಲೆ ಸೃಷ್ಟಿಸಿತ್ತು. ಒಂದೆಡೆ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಇದ್ದ ಅಸಮಾಧಾನ, ಮತ್ತೊಂದು ಕಡೆ ಬದಲಾವಣೆಯ ಬಯಕೆ, ಅದೆರಡರ ಜೊತೆ, ಎಲ್ಲರಿಗೂ ಫ್ರೀ, ಫ್ರೀ ಅನ್ನೋ ಸಿದ್ದರಾಮಯ್ಯನೋರ ಅಭಯ.

ಇದನ್ನೂ ವೀಕ್ಷಿಸಿ:  ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶದಲ್ಲಿ ದರ್ಶನ್‌ ಗ್ಯಾಂಗ್‌: ಪೊಲೀಸರು ಕೊಟ್ಟ ಆ 6 ಕಾರಣಗಳೇನು?

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more