8 ವರ್ಷವಾದ್ರೂ ಮುಗಿದಿಲ್ಲ ಕಾಮಗಾರಿ: ಸೋಮವಾರಪೇಟೆ ಹಾಕಿ ಕ್ರೀಡಾಂಗಣ ಈಗ ಪುಂಡರ ತಾಣ!

8 ವರ್ಷವಾದ್ರೂ ಮುಗಿದಿಲ್ಲ ಕಾಮಗಾರಿ: ಸೋಮವಾರಪೇಟೆ ಹಾಕಿ ಕ್ರೀಡಾಂಗಣ ಈಗ ಪುಂಡರ ತಾಣ!

Published : Apr 28, 2022, 01:27 PM IST

ಹಚ್ಚ ಹಸಿರ ಹೊದಿಕೆ ಹೊದ್ದು ಮಲಗಿರುವ ಆಕರ್ಷಕ ಕ್ರೀಡಾಂಗಣ. ಇದು ಆಸ್ಟ್ರೋ ಟರ್ಫ್ (Astro Turf) ಅಳವಡಿಸಿರೋ ಹಾಕಿ ಕ್ರೀಡಾಂಗಣ ಅನ್ನೋದು ಯಾರಿಗೂ ಅರಿವಾಗುತ್ತೆ. ಆದ್ರೆ ಈ ಕ್ರೀಡಾಂಗಣ ಆಡವಾಡಲು ಮಾತ್ರ ಲಭ್ಯವಿಲ್ಲ. 

ಹಚ್ಚ ಹಸಿರ ಹೊದಿಕೆ ಹೊದ್ದು ಮಲಗಿರುವ ಆಕರ್ಷಕ ಕ್ರೀಡಾಂಗಣ. ಇದು ಆಸ್ಟ್ರೋ ಟರ್ಫ್ (Astro Turf) ಅಳವಡಿಸಿರೋ ಹಾಕಿ ಕ್ರೀಡಾಂಗಣ ಅನ್ನೋದು ಯಾರಿಗೂ ಅರಿವಾಗುತ್ತೆ. ಆದ್ರೆ ಈ ಕ್ರೀಡಾಂಗಣ ಆಡವಾಡಲು ಮಾತ್ರ ಲಭ್ಯವಿಲ್ಲ. ಯಾಕಂದ್ರೆ ಈ ಅಂಗಣದ ಕಾಮಗಾರಿಯೇ ಮುಕ್ತಾಯವಾಗಿಲ್ಲ. ಅದೂ ಕೂಡ ಎಂಟು ವರ್ಷಗಳ ಸುಧೀರ್ಘ ಅವಧಿಯ ಬಳಿಕವೂ. ಅಂದ ಹಾಗೆ ಇದು ಹಾಕಿ ತವರು ಕೊಡಗಿನ  (Kodagu) ಸೋಮವಾರಪೇಟೆ ನಗರದಲ್ಲಿರೋ ಅಸ್ಟ್ರೋ ಟರ್ಫ್ ಕಾಮಗಾರಿ. 

ಇದೇ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ (Appacchu Ranjan) ಕ್ರೀಡಾ ಸಚಿವರಾಗಿದ್ದಾಗ ಸೋಮವಾರಪೇಟೆಗೆ ಈ ಗ್ರೌಂಡನ್ನ ಸ್ಯಾಂಕ್ಷನ್ ಮಾಡಿಸುತ್ತಾರೆ. ಆದ್ರೆ ವಿಪರ್ಯಾಸ ಅಂದ್ರೆ  ಕಳೆದ ಎಂಟು ವರ್ಷಗಳಿಂದ ಇದರ ಕಾಮಗಾರಿ ಕುಂಟುತ್ತಲೇ ಸಾಗಿದೆ. ಹೈದ್ರಾಬಾದ್ ಮೂಲದ ಸಂಸ್ಥೆಯೊಂದು ಇದರ ಕಾಮಗಾರಿ ನಡೆಸುತ್ತಿದ್ದು ಬಹಳಷ್ಟು ಕಳಪೆಯಿಂದ ಕೂಡಿದೆ ಎಂಬ ಆರೋಪವಿದೆ. ಕ್ರೀಡಾಂಗಣದ ಸುತ್ತ ಮುತ್ತ ಇನ್ನೂ ನಿಧಾನಗತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಅಲ್ಲಿ ಯಾವುದೇ ಭದ್ರತೆಯೂ ಇಲ್ಲ. ರಾತ್ರಿ ವೇಳೆ ಪಶುಗಳು ಓಡಾಡುವುದರ ಜೊತೆಗೆ ಪುಂಡರು ಕೂಡ ಇಲ್ಲಿ ಸ್ವೇಚ್ಛಾಚಾರದಿಂದ ವರ್ತಿಸುತ್ತಾರೆ ಎಂಬ ಆರೋಪವಿದೆ.

ಈ ಕ್ರೀಡಾಂಗಣದಲ್ಲಿ ಭಾರತ ಹಾಕಿ ತಂಡದ ನಾಯಕರಾಗಿದ್ದ ಅರ್ಜುನ್ ಹಾಲಪ್ಪ, ಎಸ್ವಿ ಸುನಿಲ್ ಆಡಿ ಬೆಳೆದವರು. ಹಾಗೆಯೇ ಭಾರತ ಹಾಕಿ ತಂಡವನ್ನು ಪ್ರತನಿಧಿಸಿದ್ದ ಗೋವಿಂದ್, ವಿಎಸ್ ವಿನಯ್ ಸೇರಿದಂತೆ ನೂರಾರು ಕ್ರೀಡಾಪಟುಗಳಿಗೆ ಇದೇ ಕ್ರೀಡಾಂಗಣ ತವರಾಗಿದೆ. ಇಷ್ಟೊಂದು ಆಟಗಾರರನ್ನ ದೇಶಕ್ಕೆ ನೀಡಿದ ಈ ಕ್ರೀಡಾಂಗಣ ಇಂದು ಯಾರಿಗೂ ಉಪಯೋಗವಾಗದೆ ಹೀಗೆ ಬಿದ್ದಿರುವುದು ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ ಇದೇ ಊರಿನವರಾಗಿದ್ದಾರೆ. ಆದ್ರೆ ಕಳೆದ ಎಂಟು ವರ್ಷಗಳಿಂದ ಈ ಯೋಜನೆ ಕುಂಟುತ್ತಾ ಸಾಗಿದ್ರೂ, ಇವರೂ ಕೂಡ ಅದನ್ನ ಗಟ್ಟಿಯಾಗಿ ಪ್ರಶ್ನಿಸುವ  ಧೈರ್ಯ ಮಾಡಿಲ್ಲ ಅಂತ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂಟು ವರ್ಷಗಳಲ್ಲಿ ಆಗದ ಯೋಜನೆ ಇನ್ಯಾವತ್ತು ಆಗುತ್ತೋ ಅಂತ ಸ್ಥಳೀಯ ಹಾಕಿಪಟುಗಳು ಕಾಯುವಂತಾಗಿದೆ.

 

 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more