ಪ್ರಭಾವಿಗಳಿಗೂ ತಟ್ಟುತ್ತಾ ಪೊಲೀಸರ ‌ತನಿಖೆ ಬಿಸಿ..? ದರ್ಶನ್ ಜೊತೆ ಮಾತಾಡಿದ್ದು ಏನು ಮತ್ತು ಯಾಕೆ?

Jun 21, 2024, 11:10 AM IST

ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ(Renukaswamy murder case) ಮತ್ತೆ ದರ್ಶನ್‌ಗೆ(Darshan) ಪೊಲೀಸ್ ಕಸ್ಟಡಿ ಆಗಿದೆ. 2 ದಿನ 4 ಆರೋಪಿಗಳನ್ನ ಖಾಕಿ ವಶಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ. ಉಳಿದ ಆರೋಪಿ ಪವಿತ್ರಾಗೌಡ(Pavitra Gowda) ಸೇರಿ 10 ಮಂದಿಯನ್ನ ಪರಪ್ಪನ ಆಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.ಇದರ ಮಧ್ಯೆ ಕೊಲೆ ಕೇಸ್‌ನಲ್ಲಿ ದರ್ಶನ್ ಬಚಾವ್‌ಗೆ ಯತ್ನಿಸಿದ ಪ್ರಭಾವಿಗಳಿಗೆ ನಡುಕ ಶುರುವಾಗಿದೆ. ಕಾಲ್ ಲಿಸ್ಟ್ ಕಲೆಹಾಕಿದ ಖಾಕಿ ನೋಟಿಸ್ ನೀಡಲು ತನಿಖೆಗೆ ಇಳಿದಿದೆ. ಇನ್ನು ಸಂಪುಟ ಸಭೆಯಲ್ಲಿ ದರ್ಶನ್ ಕ್ರೌರ್ಯಕ್ಕೆ ಸಿದ್ದರಾಮಯ್ಯ ಸಿಟ್ಟಾಗಿದ್ದರಂತೆ. ಮಿನಿಸ್ಟರ್ಸ್‌ಗೆ ಯಾರು ಈ ಕೇಸ್‌ನಲ್ಲಿ ಪರ,ವಿರೋಧ ಮಾಡಬೇಡಿ ತಪ್ಪಿತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಅಂತಾ ಖಡಕ್ ಸೂಚನೆ ಕೊಟ್ಟಿದ್ದರಂತೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಆರೋಗ್ಯ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..