ಭ್ರಷ್ಟಾಚಾರದ (Corruption) ವಿರುದ್ಧ ಸರ್ಕಾರ ಎಷ್ಟೇ ಸಮರ ಸಾರಿದರೂ, ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರಕ್ಕೆ (Bribe) ಇನ್ನೂ ಬ್ರೇಕ್ ಬಿದ್ದಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತವರು ತೀರ್ಥಹಳ್ಳಿಯಲ್ಲೇ (Theerthahalli) ಲಂಚಾವತಾರದ ಪ್ರಕರಣ ಬಯಲಿಗೆ ಬಂದಿದೆ.
ಶಿವಮೊಗ್ಗ (ಡಿ. 19): ಭ್ರಷ್ಟಾಚಾರದ (Corruption) ವಿರುದ್ಧ ಸರ್ಕಾರ ಎಷ್ಟೇ ಸಮರ ಸಾರಿದರೂ, ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರಕ್ಕೆ (Bribe) ಇನ್ನೂ ಬ್ರೇಕ್ ಬಿದ್ದಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತವರು ತೀರ್ಥಹಳ್ಳಿಯಲ್ಲೇ (Theerthahalli) ಲಂಚಾವತಾರದ ಪ್ರಕರಣ ಬಯಲಿಗೆ ಬಂದಿದೆ.
ಕೊರೋನಾ ಸೋಂಕು ತಗುಲಿದ ಕಾರಣ, ಸಬ್ ಇನ್ಸ್ಪೆಕ್ಟರ್ ರಜೆಯಲ್ಲಿದ್ಧಾಗ ಆಗುಂಬೆ ಠಾಣೆಯ ಇನ್ಚಾರ್ಜ್ ಎಎಸ್ಐ ದೇವದಾಸ್ ವಿ ನಾಯ್ಕ್ ಅವರ ದರ್ಬಾರ್ ಜೋರಾಗಿದೆ. ಲಂಚ ಕೊಡುವುದು ತಡವಾಗಿದ್ದಕ್ಕೆ ದೇವದಾಸ್ ವಿ ನಾಯ್ಕ್ ಬಾಯಿಗೆ ಬಂದಂತೆ ಬೈದಿದ್ಧಾರೆ.