ಧಾರವಾಡಕ್ಕೆ ಹೊರ ರಾಜ್ಯ ಪ್ರಯಾಣಿಕರ ಟೆನ್ಷನ್..!

May 25, 2020, 12:51 PM IST

ಧಾರವಾಡ(ಮೇ.25): ಧಾರವಾಡ ಜಿಲ್ಲಾಡಳಿತಕ್ಕೆ ಹೊರ ರಾಜ್ಯಗಳಿಂದ ಬಂದ ಪ್ರಯಾಣಿಕರ ಬಗ್ಗೆ ಹೊಸ ತಲೆನೋವು ಶುರುವಾಗಿದೆ. ಸ್ವ್ಯಾಬ್ ಪರೀಕ್ಷೆ ಮಾಡಿಸಿಕೊಳ್ಳದೇ 319 ಮಂದಿ ಎಸ್ಕೇಪ್ ಆಗಿದ್ದು, ಇದೀಗ ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ.

ಈ ಪ್ರಯಾಣಿಕರೆಲ್ಲಾ ತಪ್ಪು ವಿಳಾಸ, ತಪ್ಪು ಮೊಬೈಲ್ ನಂಬರ್ ನೀಡಿ ಜಿಲ್ಲಾಡಳಿತದ ದಾರಿ ತಪ್ಪಿಸಿದ್ದಾರೆ. ತೆಲಂಗಾಣದಿಂದ ಬಂದವರನ್ನು ಹೋಂ ಕ್ವಾರಂಟೈನ್ ಮಾಡಬೇಕಿತ್ತು.

ರಂಜಾನ್ ಹಬ್ಬದಲ್ಲಿ ಸಾಮಾಜಿಕ ಅಂತರ ಮರೆತ ಹುಬ್ಬಳ್ಳಿ ಮಂದಿ

ಸಾಮಾಜಿಕ ಜವಾಬ್ದಾರಿ ಮರೆತು ಜಿಲ್ಲಾಡಳಿತದ ಪಾಲಿಗೆ ಇವರೆಲ್ಲ ಹೊಸ ತಲೆನೋವು ತಂದಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.