Karwar: ಹಿನ್ನೀರಿನ ಜತೆ ಮಿಶ್ರವಾಗುವ ಉಪ್ಪು ನೀರು, ಕಂಗಾಲಾದ ಜನತೆ

Karwar: ಹಿನ್ನೀರಿನ ಜತೆ ಮಿಶ್ರವಾಗುವ ಉಪ್ಪು ನೀರು, ಕಂಗಾಲಾದ ಜನತೆ

Published : Apr 17, 2022, 12:51 PM IST

*  ನದಿಯಲ್ಲಿ‌ ಮಿಶ್ರಣವಾಗೋ‌ ಉಪ್ಪು ನೀರು ಬಾವಿಗಳಿಗೆ ಬಾರದಂತೆ ತಡೆಗೋಡೆ
*  ಉಪ್ಪು ನೀರು ಒಳಗೆ ಹರಿದು ಅಂತರ್ಜಲದೊಂದಿಗೆ ಸೇರಿ  ಬಾವಿಗಳ ನೀರು ಉಪ್ಪು 
*  ಕಳಪೆ ಕಾಮಗಾರಿಯಿಂದ ತುಂಡು ತುಂಡಾಗಿ ಉದುರಿ ಬೀಳುತ್ತಿರುವ ತಡೆಗೋಡೆ
 

ಕಾರವಾರ(ಏ.17): ಉತ್ತರಕನ್ನಡ ಜಿಲ್ಲೆಯ ಕಾರವಾರದ ಹೊರಭಾಗದಲ್ಲಿರುವ ಹಣಕೋಣ, ಹೊಟೆಗಾಳಿ, ಅಂಬಿಗವಾಡ, ಪಾಟ್ಲೋವಾಡಾ, ಬಾಬುನಾಯ್ಕವಾಡಾ ಮುಂತಾದೆಡೆ ಸುಮಾರು 35ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ಸಾರ್ವಜನಿಕ ಬಾವಿ ಸೇರಿ ಸುಮಾರು 20ಕ್ಕೂ ಹೆಚ್ಚು ಕುಡಿಯುವ ನೀರಿನ ಬಾವಿಗಳಿವೆ. ಈ ಗ್ರಾಮ ಪಂಚಾಯತ್‌ಗಳ ನಡುವೆಯೇ ಕಾಳಿ ನದಿ ಹರಿದು ಸಮುದ್ರ ಸೇರುತ್ತಿದೆ. 

ಕಾರವಾರದಿಂದ ಕೊಂಚ ದೂರದಲ್ಲೇ ಕಾಳಿ ನದಿ ಹಾಗೂ ಸಮುದ್ರ ಸಂಗಮವಾಗುವುದರಿಂದ ಇಲ್ಲಿ ಹಿನ್ನೀರಿನ ಜತೆ ಮಿಶ್ರವಾಗುವ ಉಪ್ಪು ನೀರು ಈ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹಿಂದಕ್ಕೆ ಹರಿಯುತ್ತಿದೆ. ಈ ಕಾರಣದಿಂದಾಗಿ ಕೋಟಿಗಟ್ಟಲೇ ರೂಪಾಯಿ ವೆಚ್ಚದಲ್ಲಿ ಸುಮಾರು 16 ಕಡೆಗಳಲ್ಲಿ ಸಿಮೆಂಟ್‌ನ‌ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಈ ತಡೆಗೋಡೆಗಳ ಕಾಮಗಾರಿ ಕಳಪೆಯಾಗಿದ್ದರಿಂದ ತಡೆಗೋಡೆಗಳೇ ತುಂಡು ತುಂಡಾಗಿ ಉದುರಿ ಬೀಳುತ್ತಿವೆ. ಅಲ್ಲದೇ, ತಡೆಗೋಡೆ ಭಾಗದಲ್ಲಿ ಗುಂಡಿಗಳೂ ಕಾಣಿಸತೊಡಗಿವೆ. ಇನ್ನು ತಡೆಗೋಡೆಯ ಅಡಿಭಾಗದಲ್ಲಿ ಗಟ್ಟಿ ಹಲಗೆಗಳನ್ನು ಅಳವಡಿಸಬೇಕಾಗಿತ್ತಾದರೂ ಸಪೂರ ಹಲಗೆಗಳನ್ನು ಅಳವಡಿಸಿ ಬೇಕಾಬಿಟ್ಟಿ ಕೆಲಸಗಳನ್ನು ನಡೆಸಲಾಗಿದೆ. ಇದರಿಂದಾಗಿ ಉಪ್ಪು ನೀರು ಒಳಗೆ ಹರಿದು ಅಂತರ್ಜಲದೊಂದಿಗೆ ಸೇರಿ  ಬಾವಿಗಳ ನೀರು ಉಪ್ಪಾಗತೊಡಗಿದೆ. ಅಲ್ಲದೇ, ಈ ಭಾಗದಲ್ಲಿ ರಾಶಿಯಾಗಿ ಪೊದೆಗಳು ನಿರ್ಮಾಣಗೊಂಡಿದ್ದು, ಇವುಗಳಡಿ ಹಾಗೂ ಬದಿಗಳಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿರುವುದರೊಂದಿಗೆ ನೀರು ಕೊಳೆತು ಇಡೀ ಊರಿಗೆ ಊರೇ ವಾಸನೆ ಬರುತ್ತಿದೆ. 

Hubli Riots: ಹುಬ್ಬಳ್ಳಿ ಗಲಾಟೆ ಹಿಂದೆ AIMIM ಕಾರ್ಪೋರೇಟರ್‌ ಕೈವಾಡ: ಪ್ರಮೋದ್ ಮುತಾಲಿಕ್ ಆರೋಪ

ಅಂದ ಹಾಗೆ, ಈ ತಡೆಗೋಡೆಯ ಅಡಿಭಾಗದಲ್ಲಿ ಉಪ್ಪು ನೀರು ಹಿನ್ನೀರಿನ ಜತೆ ಮಿಶ್ರಣವಾಗದಂತೆ ತಡೆಯಲು ಕಬ್ಬಿಣ ಅಥವಾ ಮರದ ದಪ್ಪ ಹಲಗೆಗಳನ್ನು ಅಳವಡಿಸಬೇಕಾಗಿತ್ತು. ಆದರೆ, ಸಾಕಷ್ಟು ಸಮಯಗಳಿಂದ ಸಪೂರ ಹಲಗೆಯನ್ನು ಅಳವಡಿಸಲಾಗುತ್ತಿರುವುದಿಂದ ಇವುಗಳು ಕೊಳೆತು ಪ್ರತೀ 3 ರಿಂದ 6 ತಿಂಗಳಿಗೊಮ್ಮೆ ಇವುಗಳು ತುಂಡಾಗಿ  ನೀರಿನಲ್ಲೇ ಕೊಚ್ಚಿ ಹೋಗುತ್ತಿವೆ. ಸಣ್ಣ ನೀರಾವರಿ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಈವರೆಗೆ ಶಾಶ್ವತ ಪರಿಹಾರ ಒದಗಿಸದ್ದರಿಂದ ಸ್ಥಳೀಯರು ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವುದು ಮುಂದುವರಿದಿದೆ. ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಅವರಿಗೆ ದೂರು ಸಲ್ಲಿಸಲಾಗಿದ್ದು, ಅವರ ಸೂಚನೆಯಂತೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಉಪ್ಪು ನೀರು ಸೇರ್ಪಡೆಗೊಳ್ಳುವ ಕೆಲವು ಸ್ಥಳಕ್ಕೆ ಮಾತ್ರ ತೆರಳಿ ವರದಿ ನೀಡಿದ್ದಾರೆ. ಆದರೆ, ಜನರಿಗೆ ಪ್ರಮುಖವಾಗಿ ಸಮಸ್ಯೆಯಾಗುತ್ತಿರುವ ಸ್ಥಳಕ್ಕೆ ಕೂಡಾ ಭೇಟಿ ನೀಡದೆ ಕೇವಲ ಸಾಮಾನ್ಯ ಮರದ ಹಲಗೆ ಹಾಕುವ ವ್ಯವಸ್ಥೆ ಮಾಡಿಸಿ ಹಿಂತಿರುಗಿದ್ದಾರೆ. ಜನರಿಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸದೆ ಕೇವಲ ನಾಮ್ ಕೇ ವಾಸ್ತೆ ಕೆಲಸ ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more