Mobile; ಹತ್ತಿಸಿಕೊಂಡ ಮೇನಿಯಾ ಬಿಟ್ಟೋಗುತ್ತಾ!... ಕುಮಟಾ ಕಾಲೇಜಲ್ಲಿ ಮೊಬೈಲ್ ರೇಡ್!

Mobile; ಹತ್ತಿಸಿಕೊಂಡ ಮೇನಿಯಾ ಬಿಟ್ಟೋಗುತ್ತಾ!... ಕುಮಟಾ ಕಾಲೇಜಲ್ಲಿ ಮೊಬೈಲ್ ರೇಡ್!

Published : Nov 17, 2021, 09:30 PM ISTUpdated : Nov 17, 2021, 09:32 PM IST

* ಆನ್‌ಲೈನ್ ಕ್ಲಾಸ್ ಹಿನ್ನೆಲೆ ಮೂಲಕ ವಿದ್ಯಾರ್ಥಿಗಳ ಕೈಗೆ ಬಂದಿದ್ದ ಮೊಬೈಲ್ 
* ಭೌತಿಕ ತರಗತಿ ಆರಂಭವಾದ್ರೂ, ಕಡಿಮೆಯಾಗದ ಮೊಬೈಲ್ ಬಳಸುವ ಅಭ್ಯಾಸ
* ತರಗತಿಯಲ್ಲೂ ಚಾಟಿಂಗ್, ಫೇಸ್ ಬುಕ್ ಹಾಗೂ  ಯುಟ್ಯೂಬ್‌ನಲ್ಲಿ ಕಾಲಹರಣ
* ವಿದ್ಯಾರ್ಥಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ ಸಿಬ್ಬಂದಿ
* ತಪಾಸಣೆ ನಡೆಸಿದ ಶಿಕ್ಷಕರಿಂದ ಸುಮಾರು 250ಕ್ಕೂ ಹೆಚ್ಚು ಮೊಬೈಲ್‌ಗಳು ವಶಕ್ಕೆ

ಕುಮಟಾ(ನ. 17)  ಕೋವಿಡ್ (Coronavirus) ಮಹಾಮಾರಿಯಿಂದ ಶಾಲಾ- ಕಾಲೇಜುಗಳ (School) ಬಾಗಿಲು ಮುಚ್ಚಿ ಆನ್‌ಲೈನ್ (Online) ಕ್ಲಾಸ್ ಪ್ರಾರಂಭದ ಮೂಲಕ ಮಕ್ಕಳ ಕೈಗೆ ಮೊಬೈಲ್ (Mobile) ಬರುವಂತಾಗಿತ್ತು. ಆದರೆ, ಇದೀಗ ಶಾಲಾ- ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭವಾದ್ರೂ, ಪಾಠ ಕೇಳುವುದಕ್ಕಿಂತ ಮೊಬೈಲ್ ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕುಮಟಾದ ಕಾಲೇಜೊಂದರಲ್ಲಿ ತಪಾಸಣೆ ನಡೆಸಿದ ಶಿಕ್ಷಕರು ಸುಮಾರು 250 ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಸ್ ನಲ್ಲಿ ಕಿರಿಕಿರಿಯಾಗುವಂತೆ ಮೊಬೈಲ್ ಬಳಸಿದ್ರೆ ಕೆಳಗೆ ಇಳಿಸ್ತಾರೆ ಹುಷಾರ್!

ಹೌದು, ಕುಮಟಾ ಪಟ್ಟಣದ ಹನಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು ತರಗತಿಗೆ ಆಗಮಿಸಿದ್ರೂ ವಿದ್ಯಾರ್ಥಿಗಳು ಮಾತ್ರ ಮೊಬೈಲ್ ಹಿಡಿದುಕೊಂಡು ಚಾಟಿಂಗ್, ಫೇಸ್ ಬುಕ್ ಹಾಗೂ  ಯುಟ್ಯೂಬ್ ಗಳಲ್ಲಿ ಕಾಲಹರಣ  ಮಾಡುತ್ತಿದ್ದರು‌. ಇದು ಪ್ರಾಂಶುಪಾಲರ ಗಮನಕ್ಕೆ ಬಂದಿದ್ದು,  ಎಲ್ಲಾ ವಿದ್ಯಾರ್ಥಿಗಳ ಮೊಬೈಲ್‌ ಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. ಇನ್ನು ಪಾಲಕರು ಖುದ್ದಾಗಿ ಬಂದು ಅವರವರ ಮಕ್ಕಳ ಮೊಬೈಲ್ ತೆಗೆದುಕೊಂಡು ಹೋಗಲು ಪ್ರಾಂಶುಪಾಲರು ಸೂಚಿಸಿದ್ದಾರೆ. ಆದರೆ, ಕೆಲವು ವಿದ್ಯಾರ್ಥಿಗಳು ಕಂಡ ಕಂಡವರನ್ನು ಪಾಲಕರೆಂದು ಹೇಳಿ ಮೊಬೈಲ್ ಪಡೆಯುವ ಪ್ರಯತ್ನ ಮಾಡಿ ಸಿಕ್ಕಿ ಬಿದ್ದ ಪ್ರಕರಣವೂ ನಡೆದಿದೆ. ಪ್ರಾಂಶುಪಾಲರು ಹೇಳೋ ಪ್ರಕಾರ, 'ತರಗತಿ ಆರಂಭವಾಗುವುದಕ್ಕೆ ಮುನ್ನವೇ  ಶಾಲಾ ಕೊಠಡಿಗಳಲ್ಲಿ ಮೊಬೈಲ್ ಬಳಸಬಾರದೆಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡಲಾಗಿತ್ತು. ಮುನ್ನೆಚ್ಚರಿಕೆಯ ಹೊರತಾಗಿಯೂ ವಿಧ್ಯಾರ್ಥಿಗಳು ಮೊಬೈಲ್ ಬಳಸಿದ್ದರಿಂದ ವಶಪಡಿಸಿಕೊಂಡಿದ್ದೇವೆ' ಎಂದು ಕಾಲೇಜು ಪ್ರಾಂಶುಪಾಲ ಸತೀಶ ನಾಯ್ಕ ತಿಳಿಸಿದ್ದಾರೆ.

 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?