Mobile; ಹತ್ತಿಸಿಕೊಂಡ ಮೇನಿಯಾ ಬಿಟ್ಟೋಗುತ್ತಾ!... ಕುಮಟಾ ಕಾಲೇಜಲ್ಲಿ ಮೊಬೈಲ್ ರೇಡ್!

Mobile; ಹತ್ತಿಸಿಕೊಂಡ ಮೇನಿಯಾ ಬಿಟ್ಟೋಗುತ್ತಾ!... ಕುಮಟಾ ಕಾಲೇಜಲ್ಲಿ ಮೊಬೈಲ್ ರೇಡ್!

Published : Nov 17, 2021, 09:30 PM ISTUpdated : Nov 17, 2021, 09:32 PM IST

* ಆನ್‌ಲೈನ್ ಕ್ಲಾಸ್ ಹಿನ್ನೆಲೆ ಮೂಲಕ ವಿದ್ಯಾರ್ಥಿಗಳ ಕೈಗೆ ಬಂದಿದ್ದ ಮೊಬೈಲ್ 
* ಭೌತಿಕ ತರಗತಿ ಆರಂಭವಾದ್ರೂ, ಕಡಿಮೆಯಾಗದ ಮೊಬೈಲ್ ಬಳಸುವ ಅಭ್ಯಾಸ
* ತರಗತಿಯಲ್ಲೂ ಚಾಟಿಂಗ್, ಫೇಸ್ ಬುಕ್ ಹಾಗೂ  ಯುಟ್ಯೂಬ್‌ನಲ್ಲಿ ಕಾಲಹರಣ
* ವಿದ್ಯಾರ್ಥಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ ಸಿಬ್ಬಂದಿ
* ತಪಾಸಣೆ ನಡೆಸಿದ ಶಿಕ್ಷಕರಿಂದ ಸುಮಾರು 250ಕ್ಕೂ ಹೆಚ್ಚು ಮೊಬೈಲ್‌ಗಳು ವಶಕ್ಕೆ

ಕುಮಟಾ(ನ. 17)  ಕೋವಿಡ್ (Coronavirus) ಮಹಾಮಾರಿಯಿಂದ ಶಾಲಾ- ಕಾಲೇಜುಗಳ (School) ಬಾಗಿಲು ಮುಚ್ಚಿ ಆನ್‌ಲೈನ್ (Online) ಕ್ಲಾಸ್ ಪ್ರಾರಂಭದ ಮೂಲಕ ಮಕ್ಕಳ ಕೈಗೆ ಮೊಬೈಲ್ (Mobile) ಬರುವಂತಾಗಿತ್ತು. ಆದರೆ, ಇದೀಗ ಶಾಲಾ- ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭವಾದ್ರೂ, ಪಾಠ ಕೇಳುವುದಕ್ಕಿಂತ ಮೊಬೈಲ್ ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕುಮಟಾದ ಕಾಲೇಜೊಂದರಲ್ಲಿ ತಪಾಸಣೆ ನಡೆಸಿದ ಶಿಕ್ಷಕರು ಸುಮಾರು 250 ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಸ್ ನಲ್ಲಿ ಕಿರಿಕಿರಿಯಾಗುವಂತೆ ಮೊಬೈಲ್ ಬಳಸಿದ್ರೆ ಕೆಳಗೆ ಇಳಿಸ್ತಾರೆ ಹುಷಾರ್!

ಹೌದು, ಕುಮಟಾ ಪಟ್ಟಣದ ಹನಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು ತರಗತಿಗೆ ಆಗಮಿಸಿದ್ರೂ ವಿದ್ಯಾರ್ಥಿಗಳು ಮಾತ್ರ ಮೊಬೈಲ್ ಹಿಡಿದುಕೊಂಡು ಚಾಟಿಂಗ್, ಫೇಸ್ ಬುಕ್ ಹಾಗೂ  ಯುಟ್ಯೂಬ್ ಗಳಲ್ಲಿ ಕಾಲಹರಣ  ಮಾಡುತ್ತಿದ್ದರು‌. ಇದು ಪ್ರಾಂಶುಪಾಲರ ಗಮನಕ್ಕೆ ಬಂದಿದ್ದು,  ಎಲ್ಲಾ ವಿದ್ಯಾರ್ಥಿಗಳ ಮೊಬೈಲ್‌ ಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. ಇನ್ನು ಪಾಲಕರು ಖುದ್ದಾಗಿ ಬಂದು ಅವರವರ ಮಕ್ಕಳ ಮೊಬೈಲ್ ತೆಗೆದುಕೊಂಡು ಹೋಗಲು ಪ್ರಾಂಶುಪಾಲರು ಸೂಚಿಸಿದ್ದಾರೆ. ಆದರೆ, ಕೆಲವು ವಿದ್ಯಾರ್ಥಿಗಳು ಕಂಡ ಕಂಡವರನ್ನು ಪಾಲಕರೆಂದು ಹೇಳಿ ಮೊಬೈಲ್ ಪಡೆಯುವ ಪ್ರಯತ್ನ ಮಾಡಿ ಸಿಕ್ಕಿ ಬಿದ್ದ ಪ್ರಕರಣವೂ ನಡೆದಿದೆ. ಪ್ರಾಂಶುಪಾಲರು ಹೇಳೋ ಪ್ರಕಾರ, 'ತರಗತಿ ಆರಂಭವಾಗುವುದಕ್ಕೆ ಮುನ್ನವೇ  ಶಾಲಾ ಕೊಠಡಿಗಳಲ್ಲಿ ಮೊಬೈಲ್ ಬಳಸಬಾರದೆಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡಲಾಗಿತ್ತು. ಮುನ್ನೆಚ್ಚರಿಕೆಯ ಹೊರತಾಗಿಯೂ ವಿಧ್ಯಾರ್ಥಿಗಳು ಮೊಬೈಲ್ ಬಳಸಿದ್ದರಿಂದ ವಶಪಡಿಸಿಕೊಂಡಿದ್ದೇವೆ' ಎಂದು ಕಾಲೇಜು ಪ್ರಾಂಶುಪಾಲ ಸತೀಶ ನಾಯ್ಕ ತಿಳಿಸಿದ್ದಾರೆ.

 

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!