Jul 6, 2020, 3:12 PM IST
ಹಾಸನ(ಜು.06): ಮಹಾಮಾರಿ ಕೊರೋನಾದಿಂದ ಸಂಬಂಧಗಳ ನಿಜ ಸ್ವರೂಪ ಬಯಲಾಗುತ್ತಿದೆ. ಮಾನವ ಸಂಬಂಧಗಳ ಮುಖವಾಡ ಕಳಚಿದೆ ಈ ಕೊರೋನಾ ವೈರಸ್. ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ ಹಾಸನ ಜಿಲ್ಲೆ. ವೃದ್ಧ ಪತಿಯ ಶವದೊಂದಿಗೆ ಪತ್ನಿಯೊಬ್ಬಳು ದಿನ ಕಳೆದ ಘಟನೆ ಹಾಸನದ ರಂಗೋಲಿಹಳ್ಳ ಬಡಾವಣೆಯಲ್ಲಿ ನಡೆದಿದೆ.
ಕೊರೋನಾ ರಣಕೇಕೆ: ರಾಜ್ಯದ ಜನತೆ ಈ ದೃಶ್ಯ ನೋಡಲೇಬೇಕು..!
ವಯೋಸಹಜ ಕಾಯಿಲೆಯಿಂದ ವೃದ್ಧ ಸಾವನ್ನಪ್ಪಿದ ಸುದ್ದಿ ಕೇಳಿದ್ರೂ ಕೊರೋನಾ ಭಯದಿಂದ ಯಾರೂ ಬಂದಿಲ್ಲ. ಹೀಗಾಗಿ ವೃದ್ಧೆಗೆ ಮಕ್ಕಳು ಇರದ ಪರಿಣಾಮ ವೃದ್ಧ ಪತಿಯ ಶವದೊಂದಿಗೆ ದಿನ ಕಳೆದಿದ್ದಾರೆ. ಕೊನೆಗೆ ನಗರಸಭೆ ಸಿಬ್ಬಂದಿಯಿಂದಲೇ ವೃದ್ಧನ ಅಂತ್ಯಕ್ರಿಯೆ ನಡೆದಿದೆ.