Belagavi: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಾಳು ಕೊಂಪೆಯಾದ ನೂರಾರು ಮನೆಗಳು

Belagavi: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಾಳು ಕೊಂಪೆಯಾದ ನೂರಾರು ಮನೆಗಳು

Published : Nov 25, 2021, 11:56 AM ISTUpdated : Nov 25, 2021, 12:01 PM IST

*  ಇರೋಕೆ ಮನೆಗಳೇ ಇಲ್ಲದೆ ಸಮುದಾಯ ಭವನಗಳಲ್ಲಿ ಒಂದು ಕಡೆ ವಾಸ
*  ಮತ್ತೊಂದು ಕಡೆ ಸರ್ಕಾರ ಕಟ್ಟಿಸಿದ ನೂರಾರು ಮನೆಗಳಿದ್ರೂ ಸಹ ಬರ್ತಿಲ್ಲ ಜನ
*  ಮನೆ ನಿರ್ಮಾಣವಾಗಿ 10 ವರ್ಷಗಳು ಕಳೆದರೂ ಮೂಲಭೂತ ಸೌಲಭ್ಯಗಳಿಲ್ಲ
 

ಚಿಕ್ಕೋಡಿ(ನ.25):  ಕೃಷ್ಣಾ ನದಿ ತೀರದಲ್ಲಿ ನೆರೆ ಬಂದು ಜನ ಮನೆ ಕಳೆದುಕೊಂಡು ದೇವಸ್ಥಾನ ಸಮುದಾಯ ಭವನಗಳಲ್ಲಿ ವಾಸವಿದ್ರೆ ಇತ್ತ ಸರ್ಕಾರ ನಿರಾಶ್ರಿತರಿಗೆ ಅಂತ ಕಟ್ಟಿದ ನೂರಾರು ಮನೆಗಳಲ್ಲಿ ಜನರೇ ಇಲ್ಲ. ಅತ್ತ ನದಿ ತೀರದಲ್ಲಿ ಮನೆ ಇಲ್ಲದೆ ಜನ ಪರಿತಪಿಸುತ್ತಿದ್ದರೆ ಇತ್ತ ಮನೆಗಳಿದ್ದರೂ ಸಹ ಜನ ಅಲ್ಲಿಗೆ ಇರೋಕೆ ಮನಸು ಮಾಡ್ತಿಲ್ಲ ಅರೆ ಅದ್ಯಾಕೆ ಜನ ಅಲ್ಲಿರೋಕೆ ಕಾಯೆ ಹಿಂದೇಟು ಹಾಕ್ತಿದಾರೆ ಅಂತೀರಾ ಈ ಸ್ಟೋರಿ ನೋಡಿ...

ಸತತ ಮೂರು ವರ್ಷಗಳ ರಣಭೀಕರ ಪ್ರವಾಹಕ್ಕೆ ಸಿಲುಕಿ ಕೃಷ್ಣಾ ನದಿ ತೀರದ ಅದೆಷ್ಟೋ ಕುಟುಂಬಗಳು ಇನ್ನೂ ಸಹ ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ವಾಸವಿದೆ. ಆದರೆ ಸರ್ಕಾರವೇ ನಿರಾಶ್ರಿತರಿಗೆ ಅಂತ ಕಟ್ಟಿದ ನೂರಾರು ಸೂರುಗಳು ಜನರೇ ಇಲ್ಲದೆ ಹಾಳು ಕೊಂಪೆಯಾಗಿವೆ. ಹೌದು, ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಸ್ವತಹ ಸರ್ಕಾರದಿಂದಲೇ ನಿರ್ಮಾಣವಾದ ಮನೆಗಳು. ಮನೆ ನಿರ್ಮಾಣವಾಗಿ 10 ವರ್ಷಗಳು ಕಳೆದರೂ ಸಹ ಜನ ಇಲ್ಲಿಗೆ ಬಂದು ಇರೋಕೆ ಮನಸ್ಸು ಮಾಡುತ್ತಿಲ್ಲ.! 

Council Election: ಅಖಾಡದಲ್ಲಿರೋ ಇವರು1000 ಕೋಟಿಗಳ ಒಡೆಯ

2010-11 ಸಾಲಿನಲ್ಲಿ ರಾಯಬಾಗದ ನಿರಾಶ್ರಿತರಿಗೆ ಅಂತಾನೆ ವಾಜಪೇಯಿ ವಸತಿ ಯೋಜನೆಯಡಿ ಸುಮಾರು 8 ಎಕರೆ ವಿಸ್ತಿರ್ಣದ ಭೂ ಪ್ರದೇಶದಲ್ಲಿ ಈ ಮನೆಗಳು ನಿರ್ಮಾಣವಾಗಿವೆ. ಸರ್ಕಾರ ಕೊಟ್ಯಂತರ ರೂಪಾಯಿ ಖರ್ಚು ಮಾಡಿ ಈ ಸೂರುಗಳನ್ನೇನೋ ನಿರ್ಮಾಣ ಮಾಡಿದೆ. ಆದರೆ ಅಲ್ಲಿ ಬದುಕಲು ಮೂಲಭೂತ ಸೌಕರ್ಯಗಳನ್ನ ಅಧಿಕಾರಿಗಳು ಜನರಿಗೆ ಮಾಡಿಕೊಡುವಲ್ಲಿ ಎಡವಿದ್ದಾರೆ ಎಂದು ಜನ ಆರೋಪ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಜನ ಇಲ್ಲಿರೋಕೆ ಮನಸು ಮಾಡ್ತಿಲ್ಲ ಎನ್ನುವುದು ಜನರ ವಾದ.

ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಸಹ ಪೂಜಾರಿ ವರ ನೀಡಲಿಲ್ಲ ಎಂಬಂತೆ ಮನೆಗಳು ನಿರ್ಮಾಣವಾಗಿ 10 ವರ್ಷಗಳೇ ಕಳೆದರೂ ಸಹ ಇಲ್ಲಿಯವರೆಗೂ ಅಧಿಕಾರಿಗಳಿಗೆ ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಆಗಿಲ್ಲ. ಹೀಗಾಗಿ ಸರ್ಕಾರದ ಕೋಟಿ ಕೋಟಿ ಅನುದಾನ ನೀರಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಇನ್ನಾದರೂ ಈ ಪ್ರದೇಶಕ್ಕೆ ಅಧಿಕಾರಿಗಳು ಮೂಲಭೂತ ಸೌಕರ್ಯ ಒದಗಿಸಿಕೊಡ್ತಾರಾ ಎಂಬುದನ್ನ ಕಾದು ನೋಡಬೇಕಿದೆ. 
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more